Profit through modern farming practices :- ನಮಸ್ಕಾರ ಆತ್ಮೀಯ ರೈತಬಾಂಧವರಿಗೆ ಆಧುನಿಕ ಬೇಸಾಯ ಪದ್ಧತಿ ಮೂಲಕ ಕೃಷಿಯಲ್ಲಿ ಹೆಚ್ಚಿನ ಲಾಭ!

ಕೃಷಿ ನಮ್ಮ ದೇಶ ಪ್ರಧಾನ ಕಸುಬಾಗಿದೆ. ದೇಶದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ಕೊಡುತ್ತಿದೆ. ಆದರೆ ಕೃಷಿಯಿಂದ ನಿರೀಕ್ಷಿತ ಲಾಭಗಳಿಸುವುದು ಅಸ್ಟು ಸುಲಭದ ಮಾತಲ್ಲ. ಆದರೂ ಇತ್ತೀಚಿಗೆ ವಿದ್ಯಾವಂತ ಯುವಕರೂ ಕೂಡ ಆಧುನಿಕ ಬೇಸಾಯ ಪದ್ಧತಿಯ ಮೂಲಕ ಕೃಷಿಯಲ್ಲೂ ಲಾಭ ತೆಗೆಯುತ್ತಿದ್ದಾರೆ. ತರಕಾರಿ, ಹಣ್ಣಗಳಂತಹ ವಾಣಿಜ್ಯ ಬೆಳೆಗಳಿಂದ ಉತ್ತಮ ಲಾಭ ಪಡೆಯುತ್ತಿದ್ದಾರೆ.

ಹೌದು ಆಧುನಿಕ ಬೇಸಾಯ ಪದ್ಧತಿ ಎಂದರೇನು??

ಕೃಷಿ ನಮ್ಮ ದೇಶ ಪ್ರಧಾನ ಕಸುಬಾಗಿದೆ. ದೇಶದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ಕೊಡುತ್ತಿದೆ. ಆದರೆ ಕೃಷಿಯಿಂದ ನಿರೀಕ್ಷಿತ ಲಾಭಗಳಿಸುವುದು ಅಸ್ಟು ಸುಲಭದ ಮಾತಲ್ಲ. ಆದರೂ ಇತ್ತೀಚಿಗೆ ವಿದ್ಯಾವಂತ ಯುವಕರೂ ಕೂಡ ಆಧುನಿಕ ಬೇಸಾಯ ಪದ್ಧತಿಯ ಮೂಲಕ ಕೃಷಿಯಲ್ಲೂ ಲಾಭ ತೆಗೆಯುತ್ತಿದ್ದಾರೆ. ತರಕಾರಿ, ಹಣ್ಣಗಳಂತಹ ವಾಣಿಜ್ಯ ಬೆಳೆಗಳಿಂದ ಉತ್ತಮ ಲಾಭ ಪಡೆಯುತ್ತಿದ್ದಾರೆ.

ಅದಕ್ಕೆ ಇಲ್ಲೊಬ್ಬ ರೈತ ಉತ್ತಮ ಉದಾಹರಣೆಯಾಗಿದ್ದಾನೆ. ಟೊಮೆಟೊ ಕೃಷಿಯ ಮೂಲಕ ಕಡಿಮೆ ಖರ್ಚಲ್ಲಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾನೆ. ಟೊಮೆಟೊಗೆ ಹಳ್ಳಿಗಳಿಂದ ನಗರಗಳವರೆಗೆ ಉತ್ತಮ ಬೇಡಿಕೆ ಇದೆ. ಹಾಗಾಗಿ ಟೊಮೆಟೊ ಕೃಷಿ ಲಾಭದಾಯಕ ವ್ಯವಹಾರವಾಗಿದೆ.

ಫರೂಕಾಬಾದ್‌ನ ರೈತ ರಾಜ್ ಎಂಬಾ ಸಾವಿರ ಲೆಕ್ಕದಲ್ಲಿ ಹೂಡಿಕೆ ಮಾಡಿ ಲಕ್ಷಗಳಲ್ಲಿ ಸಂಪಾದನೆ ಮಾಡುತ್ತಿದ್ದಾನೆ. ಇಲ್ಲಿನ ರೈತರು ಹಿಂದೆ ಆಲೂಗಡ್ಡೆ ಮತ್ತು ಭತ್ತದ ಬೆಳೆಗೆ ಹೆಚ್ಚು ಅವಲಂಬಿತರಾಗಿದ್ದರು. ಆದರೆ ಈಗ ವಾಣಿಜ್ಯ ಬೆಳೆಗಳಿಗೆ ಬದಲಾಯಿಸಿಕೊಂಡು ಉತ್ತಮ ಲಾಭ ಗಳಿಸುತ್ತಿದ್ದಾರೆ. ಮತ್ತೊಂದೆಡೆ ವೆಚ್ಚವೂ ಕಡಿಮೆಯಾಗುತ್ತಿದೆ. ತರಕಾರಿ ಬೆಳೆಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸುವುದರಿಂದ ಕಡಿಮೆ ನೀರಿನ ಬಳಕೆ ಮೂಲಕ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ಈ ಭಾಗದ ಕೆಲವು ರೈತರು ಪಾಲಿ ಹೌಸ್ ಮತ್ತು ಶೆಡ್‌ನೆಟ್‌ಗಳ ಮೂಲಕವೂ ತರಕಾರಿ ಬೆಳೆಯುವುದರಿಂದ ಹೆಚ್ಚು ಇಳುವರಿ ಕೂಡ ಸಿಗುತ್ತಿದೆ.

ಕಮಲಗಂಜ್ ನ ರೈತ ರಾಜ್ ಮಾತನಾಡಿ, ನಾನು ಬಾಲ್ಯದಿಂದಲೂ ತರಕಾರಿ ಕೃಷಿ ಮಾಡುತ್ತಿದ್ದೇನೆ. ಇದರಿಂದಾಗಿ ಒಳ್ಳೆಯ ಆದಾಯವನ್ನು ಗಳಿಸುತ್ತಿದ್ದೇನೆ. ಸದ್ಯ ಟೊಮೆಟೊ ಕೃಷಿ ಮಾಡುತ್ತಿದ್ದೇನೆ. ಇಲ್ಲಿಯವರೆಗೆ ಈ ಬೆಳೆಯಿಂದ ಯಾವುದೇ ನಷ್ಟ ಅನುಭವಿಸಿಲ್ಲ. ಬೆಳೆ ಸಿದ್ಧವಾದ ನಂತರ, ಟೊಮೆಟೊಗಳನ್ನು ಪ್ರತಿದಿನ ಕೊಯ್ದು ಮಾಡಲಾಗುತ್ತದೆ.

ಈ ಬೆಳೆ 2 ರಿಂದ 3 ತಿಂಗಳವರೆಗೆ ನಿರಂತರ ಉತ್ಪಾದನೆ ಸಿಗುತ್ತದೆ. ಬೇಸಿಗೆಯಲ್ಲಿ ಟೊಮೆಟೊಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಪ್ರತಿಯೊಬ್ಬರೂ ಇದನ್ನು ಮನೆಗಳಲ್ಲಿ ಅಡುಗೆಗೆ ಮಾತ್ರವಲ್ಲದೆ, ಪಾಸ್ಟ್‌ಫುಡ್, ಸಲಾಡ್‌ಗಳಲ್ಲಿ ಮತ್ತು ವಿವಿಧ ಭಕ್ಷ್ಯಗಳಲ್ಲಿ ಬಳಸುತ್ತಾರೆ. ಇದರಿಂದಾಗಿ ಅದು ಉತ್ತಮವಾಗಿ ಮಾರಾಟವಾಗುತ್ತಿದೆ. ಋತುವಿನ ಅಂತ್ಯದ ನಂತರ, ಗಿಡಗಳನ್ನು ಹೊಲಗಳಲ್ಲಿ ಮತ್ತು ಇತರ ಬೆಳೆಗಳಲ್ಲಿ ಸಾವಯವ ಗೊಬ್ಬರವಾಗಿ ಬಳಸಲಾಗುತ್ತದೆ.

ಈ ಬೆಳೆ ಗಿಡ ನೆಟ್ಟ ನಂತರ ಒಂದರಿಂದ ಎರಡು ತಿಂಗಳಲ್ಲಿ ಇಳುವರಿ ನೀಡಲು ಪ್ರಾರಂಭಿಸುತ್ತದೆ. ಸಂಜೆಯ ವೇಳೆ ಟೊಮೆಟೊ ಕೊಯ್ದು ಬೆಳಗ್ಗೆ ಕಮಲಗಂಜ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇವೆ. ಈ ಕೆಲಸಕ್ಕೆ ಹೆಚ್ಚಿನ ಕಾರ್ಮಿಕರು ಅಗತ್ಯವಿಲ್ಲ.

ಇದನ್ನು ರೈತರೊಂದಿಗೆ ಹಂಚಿಕೊಳ್ಳುವ ಮೂಲಕ ರೈತರಿಗೆ ಸಹಾಯ ಮಾಡಿ.

ಕೃಷಿ ಆಧಾರಿತ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ತಪ್ಪದೇ ಕೃಷಿ ವಾಹಿನಿ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ 👇🏻

https://chat.whatsapp.com/D6bfj7BBl7lLxTGZOcd2Mh

Leave a Reply

Your email address will not be published. Required fields are marked *