ಪ್ರೀಯ ರೈತರೇ, ಸರ್ಕಾರವು ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಅತಿ ಹೆಚ್ಚು ಮಳೆಯಿಂದಾಗಿ ಬೆಳೆ ಹಾನಿಯಾಗಿರುವಂತಹ ರೈತರ ಖಾತೆಗೆ ಪರಿಹಾರ ಹಣವನ್ನು ಹಾಕಲಾಗುತ್ತಿದೆ. ಈ ಹಣ ನಿಮ್ಮ ಖಾತೆಗೆ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ? ಎಂಬುದರ ವಿವರವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ಅತಿ ಹೆಚ್ಚು ಮಳೆಯಿಂದಾಗಿ ರೈತರ ಬೆಳೆಗಳು ಹಾನಿ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರವು ಅಂತಹ ಪ್ರದೇಶಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಿ, ಬೆಳೆ ಹಾನಿಯಾಗಿರುವ ರೈತರಿಗೆ ಪರಿಹಾರ ಧನವನ್ನು ಬಿಡುಗಡೆ ಮಾಡಲಾಗಿದೆ. ನಿಮ್ಮ ಜಮೀನಿನಲ್ಲೂ ಬೆಳೆ ಹಾನಿಯಾಗಿದ್ದಾರೆ ನಿಮಗೆ ಪರಿಹಾರ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು,

# ಮೊದಲು ನೀವು parihara.karnataka.gov.in ಎಂಬ ವೆಬ್ ಸೈಟಿಗೆ ಭೇಟಿ ನೀಡಬೇಕು. ಇದನ್ನು ನೀವು ಮೊಬೈಲ್ ನಲ್ಲಿ ಸಹ ಚೆಕ್ ಮಾಡಬಹುದು.

# ತೆರೆದುಕೊಂಡ ಮುಖಪುಟದಲ್ಲಿ “ಪರಿಹಾರ ಸೇವೆಗಳು” ಎಂಬುದಾಗಿ ನಮೂದಿಸಿರುತ್ತದೆ. ಅಲ್ಲಿ ಕಾಣುವ “ಪರಿಹಾರ ಪಾವತಿ” ಆಯ್ಕೆ ಮೇಲೆ ಕ್ಲಿಕ್ ಮಾಡಿ.

# ಇದಾದ ನಂತರ ನಿಮಗೆ ಪರಿಹಾರ ಹಣ ಸಂದಾಯ ವರದಿ ಎಂಬ ಇನ್ನೊಂದು ಮುಖಪುಟ ತೆರೆದುಕೊಳ್ಳುತ್ತದೆ.

# ನಿಮ್ಮ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಲು ಎರಡು ರೀತಿಯ ಆಯ್ಕೆಗಳನ್ನು ನೀಡಲಾಗುತ್ತದೆ.

ಪರಿಹಾರ ಸಂಖ್ಯೆ

• ಆಧಾರ್ ಕಾರ್ಡ್ ಸಂಖ್ಯೆ

ಇವೆರಡರ ಮೂಲಕ ನಿಮ್ಮ ಪೇಮೆಂಟ್ ಸ್ಟೇಟಸ್ ಅನ್ನು ಚೆಕ್ ಮಾಡಬಹುದು.

# ನೀವು ಪರಿಹಾರ ಸಂಖ್ಯೆಯನ್ನು ಹೊಂದಿಲ್ಲದಿದ್ದರೆ “ಆಧಾರ್ ಕಾರ್ಡ್ ಸಂಖ್ಯೆ” ಆಯ್ಕೆಯನ್ನು ಮಾಡಿ ಮುಂದುವರೆಯಬೇಕು.

# ನಂತರ ಅದರಲ್ಲಿ ಕೇಳಲಾದ ಮಾಹಿತಿಯ ಸರಿಯಾದ ಆಯ್ಕೆಯನ್ನು ಮಾಡಬೇಕು.

# ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದ ನಂತರ ವಿವರಗಳನ್ನು ಪಡೆಯಿರಿ (fetch details) ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

ಇದನ್ನು ಓದಿ :

ಕೃಷಿ ಭೂಮಿ ಪಡೆಯಲು ಸಹಾಯದನಕ್ಕೆ ಅರ್ಜಿ ಅಹ್ವಾನ!!

ರೇಷ್ಮೆ ಕೃಷಿಗೆ ಸರ್ಕಾರದಿಂದ ಸಹಾಯದನ!!

# ನಂತರ ನಿಮಗೆ ಎರಡು ರೀತಿಯ ಮಾಹಿತಿಗಳನ್ನು ನೀಡಲಾಗುತ್ತದೆ.

• ಪೇಮೆಂಟ್ ಡೀಟೇಲ್ಸ್ ಅಥವಾ ಹಣ ಬಿಡುಗಡೆಯ ವಿವರ

• ಬೆಳೆಗಳ ವಿವರ

# ಪೇಮೆಂಟ್ ಡೀಟೇಲ್ಸ್ ನಲ್ಲಿ ನಿಮಗೆ,

• ಬ್ಯಾಂಕ್ ಹೆಸರು

• ಖಾತೆದಾರರ ಹೆಸರು

• ಅಕೌಂಟ್ ನಂಬರ್

• ಹಣ ಜಮಾ ಆಗಿದಿಯೋ ಇಲ್ಲವೋ

ಇವೆಲ್ಲವುದರ ಮಾಹಿತಿಯನ್ನು ನೀಡಲಾಗುತ್ತದೆ.

ಈ ರೀತಿಯಾಗಿ ನಿಮ್ಮ ಹೊಲದಲ್ಲಿ ಬೆಳೆ ಹಾನಿಯಾಗಿದ್ದರೆ ಪರಿಹಾರ ಧನ ಜಮಾ ಆಗಿದೆಯೂ ಇಲ್ಲೋ ಎಂಬ ಸ್ಟೇಟಸ್ ಅನ್ನು ಚೆಕ್ ಮಾಡಬಹುದು.

ಒಂದು ವೇಳೆ ನೀವು ಜಮೀನಿನ ಬೆಳೆ ಹಾನಿಯ ವರದಿ ವಿವರಗಳನ್ನು ಚೆಕ್ ಮಾಡಲು

ಹೆಚ್ಚಿನ ಕೃಷಿಗೆ ಸಂಬಂದಿಸಿದ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಗಿನ ಲಿಂಕ್ ಒತ್ತಿ 👇

https://chat.whatsapp.com/KgkiwIwv2THC2yeeT1DqYC

ಮೊದಲೇ ಹೇಳಿದ ಪರಿಹಾರ ಸೇವೆಗಳಲ್ಲಿ

ಡಾಟಾ ಎಂಟ್ರಿ ಪ್ರಗತಿ ವಿವರ” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ನಂತರ ಅಲ್ಲಿ ಕೇಳುವ ವರ್ಷ, ಸೀಸನ್, ಮತ್ತು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ.

ಇದಾದ ನಂತರ ನಿಮಗೆ ಅಲ್ಲಿ ಯಾವ ಯಾವ ಜಿಲ್ಲೆಗೆ ಹಣ ಬಿಡುಗಡೆ ಆಗಿದೆ? ಯಾವ ಪ್ರದೇಶಗಳು ಅಪ್ರೂವ್ ಆಗಿವೆ? ಮತ್ತು ವಿಲ್ಲೇಜ್ ಅಕೌಂಟೆಂಟ್ ಬಂದು ಹನಿಯ ಪರಿಶೀಲನೆಯನ್ನು ಮಾಡಿ ವರದಿಯನ್ನು ನೀಡುತ್ತಾರೆ.

ಈ ರೀತಿಯಾಗಿ ಅತಿ ಮಳೆಯಿಂದಾಗಿ ಹಾನಿಯಾಗಿರುವಂತ ಬೆಳೆಗಳಿಗೆ ಪರಿಹಾರ ಧನ ರೈತರ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.

ರೈತರು ತಮ್ಮ ಹಾನಿಯಾದ ಬೆಳೆಗಳಿಗೆ ಪರಿಹಾರ ಹಣ ಪಡೆಯಲು ಮೊದಲು ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಅಂತಹ ರೈತರು ಮಾತ್ರ ಬೆಳೆ ಹಾನಿ ಪರಿಹಾರ ಪಡೆಯಲು ಅರ್ಹರಿರುತ್ತಾರೆ. ಅರ್ಜಿ ಸಲ್ಲಿಸಿದ ರೈತರ ಜಮೀನುಗಳಿಗೆ ವಿಲ್ಲೇಜ್ ಅಕೌಂಟೆಂಟ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ವರದಿಯನ್ನು ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ 🌱

ವೆಬ್ಸೈಟ್ ನ ಸಂಪರ್ಕದಲ್ಲಿರಿ..

One thought on “ಬೆಳೆ ಹಾನಿ ಪರಿಹಾರ ಹಣ ಜಮಾ ಆಗಿದಿಯೋ ಇಲ್ಲವೋ..??”

Leave a Reply

Your email address will not be published. Required fields are marked *