Last date Rabi crop insurance 2023 :- ರೈತಾಪಿ ಜನರಿಗೆ ಸಿಹಿ ಸುದ್ದಿಯನ್ನು ನಮ್ಮ ಸರ್ಕಾರವನ್ನು ನೀಡಿದೆ. 2023-24 ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಹಿಂಗಾರು ಬೆಳೆವಿಮೆ ತುಂಬಲು ರೈತರಿಗೆ ಸರ್ಕಾರವು ಅರ್ಜಿ ಆಹ್ವಾನ ಮಾಡಲಾಗಿದೆ. ಈ ಬೆಳೆ ವಿಮೆಯನ್ನು ಹೇಗೆ ತುಂಬಬೇಕು? ಯಾವ ಯಾವ ಬೆಳೆಗಳಿಗೆ ಎಷ್ಟು ಹಣವನ್ನು ತುಂಬಬೇಕು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಯಾವ ಯಾವ ಬೆಳೆಗಳಿಗೆ ಎಷ್ಟು ಬೆಳೆ ವಿಮೆ ತುಂಬಬೇಕು?

ಸರ್ಕಾರವು ಕಡಲೆ (ಮಳೆಯಾಶ್ರಿತ), ಕಡಲೆ (ನೀರಾವರಿ) ಜೋಳ (ನೀರಾವರಿ), ಜೋಳ (ಮಳೆಯಾಶ್ರಿತ ), ಗೋದಿ (ಮಳೆಯಾಶ್ರಿತ), ಗೋದಿ (ನೀರಾವರಿ), ಗೋವಿನ ಜೋಳ (ನೀರಾವರಿ), ಸೂರ್ಯಕಾಂತಿ (ನೀರಾವರಿ) ಇಷ್ಟು ಬೆಳೆಗಳಿಗೆ ಬೆಳೆ ವಿಮೆ ಮೇಲೆ ತುಂಬದು ಅರ್ಜಿ ಆಹ್ವಾನ ಮಾಡಿದೆ. ಈ ಬೆಳೆಗಳನ್ನು ಬೆಳೆದ ರೈತರು ನಾವು ಕೆಳಗೆ ನೀಡಿರುವ ಚಿತ್ರವನ್ನು ನೋಡಿಕೊಂಡು ಅಲ್ಲಿರುವಂತಹ ದರವನ್ನು ಅಥವಾ ಹಣವನ್ನು ನೋಡಿ ಪ್ರತಿ ಹೆಕ್ಟರ್ ಗೆ ನಿರ್ದಿಷ್ಟವಾದ ಹಣವನ್ನು ತುಂಬಬೇಕಾಗಿ ಸರ್ಕಾರವು ಆದೇಶ ಹೊರಡಿಸಿದೆ.

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಮತ್ತು ಕೊನೆ ದಿನಾಂಕ

ರೈತರು ತಮ್ಮ ಬೆಳೆಗಳಿಗೆ ನಿಮ್ಮ ಸಮೀಪದ ಗ್ರಾಮ ಒನ್ ಸೆಂಟರಗಳಿಗೆ ಭೇಟಿ ನೀಡಿ ಬೆಳೆವಿಮೆ ತುಂಬಲು ರೈತಬಾಂಧವರಲ್ಲಿ ವಿನಂತಿ. ಒಂದು ವೇಳೆ ನೀವು ಮುಂದೆ ನಿಮ್ಮ ಬೆಳೆಗಳ ಪರಿಹಾರವನ್ನು ಸರ್ಕಾರದಿಂದ ಪಡೆಯಬೇಕಾದರೆ ಈ ಬೆಳೆವಿಮೆಯನ್ನು ತುಂಬುವುದು ಅವಶ್ಯಕವಾಗಿದೆ. ಆದ ಕಾರಣ ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ಪ್ರತಿಯೊಂದು ಬೆಳೆಗೆ ತನ್ನದೇ ಆದ ಕೊನೆಯ ದಿನಾಂಕವನ್ನು ನೀಡಿದ್ದಾರೆ. ಕೆಲವೊಂದು ಬೆಳಗೆ ಡಿಸೆಂಬರ್ 31ನೇ ತಾರೀಕು ಕೆಲವೊಂದು ಕೊನೆ ದಿನಾಂಕ ಎಂದು ಸರ್ಕಾರವು ಘೋಷಣೆ ಮಾಡಿದೆ.

ಹಿಂಗಾರು ಬೆಳೆಗಳಿಗೆ ನೋಂದಣಿ ಪ್ರಾರಂಭ ಹಾಗೂ ಯಾವ ಯಾವ ಬೆಳೆಗೆ ಯಾವುದು ಕೊನೆಯ ದಿನಾಂಕ ಇಲ್ಲಿ ನೋಡಿರಿ..

ಮೊದಲಿಗೆ ಈ ಕೆಳಕಂಡ ಲಿಂಕ್ ಅನ್ನು ಒತ್ತಿರಿ 👇🏻

https://samrakshane.karnataka.gov.in/PublicView/FindCutOff.aspx

ನಂತರ ಅಲ್ಲಿ ಮುಖಪುಟದಲ್ಲಿ ಕಾಣುವಹಾಗೆ ವರ್ಷ, season (ಹಿಂಗಾರು ) ಮತ್ತು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡರೆ. ನೀವು ಬೆಳೆಗಳಿಗೆ ವಿಮೆ ಕಟ್ಟುವ ಕೊನೆಯ ದಿನಾಂಕ ನಿಮಗೆ ಕಾಣಿಸುತ್ತದೆ..

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು?

ರೈತರು ನಿಮ್ಮ ಆಧಾರ್ ಕಾರ್ಡ್, ನಿಮ್ಮ ಹೊಲದ ಪಹಣಿ ಪತ್ರ, ಬೆಳೆವಿಮೆ ತುಂಬುವ ಅರ್ಜಿ, ನಿಮ್ಮ ಹತ್ತಿರ ಇರುವ ಮೊಬೈಲ್ ಸಂಖ್ಯೆ, ನಿಮ್ಮ FID ನಂಬರ್ ಎಲ್ಲವನ್ನು ನೀವು ತೆಗೆದುಕೊಂಡು ಹೋಗಿ ಗ್ರಾಮವನ್ ಅಥವಾ ಸೇವಾ ಸಿಂಧುವಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗಿ ವಿನಂತಿ.

ನಿಮಗೇ ಎಷ್ಟು ಬೆಳೆ ವಿಮೆ ಹಣ ಜಮೆ ಯಾಗಿದೆ?

ಕೇವಲ ನಿಮ್ಮ ಆಧಾರ್ ನಂಬರ್ ಅನ್ನು ನಮೂದಿಸಿ ನಿಮಗೆ ಎಷ್ಟು ಬೆಳೆ ವಿಮೆ ಜಮೆಯಾಗಿದೆ ಎಂಬ ಸ್ಟೇಟಸ್ ಅನ್ನು ಈ ಕೆಳಗಿನಂತೆ ಆನ್ಲೈನ್ ಮೂಲಕ ಹಣ ಜಮೆ ಆಗಿರುವುದನ್ನು ಸ್ಟೇಟಸ್ ಚೆಕ್ ಮಾಡುವುದು ಹೇಗೆ ಈ ಕೆಳಗಿಂನಂತೆ ನೋಡಿರಿ 👇🏻

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/Premium/CheckStatusMain_aadhaar.aspx

ನಿಮ್ಮ ಜಿಲ್ಲೆಯ ಇನ್ಸೂರೆನ್ಸ್(insurance) ಕಂಪನಿ ಯಾವುದು ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಯಾವ ಜಿಲ್ಲೆಗೆ ಯಾವ ಇನ್ಶೂರೆನ್ಸ್ ಕಂಪನಿ ಇರುವ ಬಗ್ಗೆ ಮಾಹಿತಿಯನ್ನು ನೀವು ತಿಳಿದುಕೊಳ್ಳುತ್ತೀರಿ.👇🏻

https://samrakshane.karnataka.gov.in/HomePages/frmKnowYourInsCompany.aspx

ಹೊಸ ಓಪನ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಆಗ ನಿಮ್ಮ ಜಿಲ್ಲೆಯ ಇನ್ಸೂರೆನ್ಸ್ ಕಂಪನಿ ಯಾವುದು ಎಂಬುದರ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ.

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/BV4GiFXeLXJKfXFJFZSiGj

ಹಿಂಗಾರು ಬೆಳೆವಿಮೆ:-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

Leave a Reply

Your email address will not be published. Required fields are marked *