Central government increased coconut support price :- ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ
ನವದೆಹಲಿ: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್ಗೆ 250 ರಿಂದ 300 ರೂ. ಹೆಚ್ಚಿಸಿದ್ದಾಗಿ ಸರ್ಕಾರ ಘೋಷಣೆ ಮಾಡಿದೆ. ಈ ಮೂಲಕ 2024ರ ಸೀಸನ್ನಲ್ಲಿ ಕೊಬ್ಬರಿ ಕ್ವಿಂಟಾಲ್ಗೆ 11,160ರಿಂದ 12,000 ರೂ. ಆಗಿರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ಕುರಿತು ನಿರ್ಣಯ ತಳೆಯಲಾಗಿದೆ.
ಕೃಷಿಕರ ಸಂಕಷ್ಟಕ್ಕೆ ಸ್ಪಂದಿಸುವುದೇ ಮೋದಿ ಸರ್ಕಾರದ ಮೊದಲ ಆದ್ಯತೆ” ಇದರ ಪ್ರತೀಕವಾಗಿ
ಪ್ರಧಾನಿ ಶ್ರೀ @narendramodi ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್ ಗೆ 250 ರಿಂದ 300 ರೂ.ಗಳಿಗೆ ಹೆಚ್ಚಿಸಿ ಮಹತ್ವದ ನಿರ್ಣಯ ಕೈಗೊಂಡಿದ್ದು, ಕಳೆದ ಹತ್ತು ವರ್ಷಗಳಲ್ಲಿ ಇಡೀ ಕೊಬ್ಬರಿಯ ಎಂಎಸ್’ಪಿ ಕ್ವಿಂಟಾಲ್ ಗೆ 5,250 ಹಾಗೂ ಗಿರಣಿ ಕೊಬ್ಬರಿ 5500 ರೂಗಳಿಗೆ ಏರಿಸಲಾಗಿದೆ.
https://twitter.com/BYVijayendra/status/1740198255601021030?t=ERXUVo6wmeoPoolNakLmAA&s=19
2024 ಸಾಲಿನ ಅನ್ವಯ ಕ್ವಿಂಟಾಲ್’ಗೆ 11,160 ರೂ ಹಾಗೂ ಉಂಡೆ ಕೊಬ್ಬರಿಗೆ 12,000 ರೂ. ಬೆಂಬಲ ಬೆಲೆ ನಿಗದಿ ಪಡಿಸಿ ನಾಡಿನ ಅನ್ನದಾತರ ಕಷ್ಟಕ್ಕೆ ಸ್ಪಂದಿಸಿರುವ ನಮ್ಮ ಕೇಂದ್ರ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು.
‘ಜಾಗತಿಕವಾಗಿ ಕೊಬ್ಬರಿ ಬೆಲೆ ಕುಸಿದಿದೆ.
» ಕ್ವಿಂಟಾಲ್ಗೆ 250 ರಿಂದ 300 ರೂ. ಹೆಚ್ಚಳ
» ಪ್ರಧಾನಿ ಮೋದಿ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಧಾರ
ಹೀಗಾಗಿ ಮೋದಿ ಸರ್ಕಾರ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಶೇ.50 ಹೆಚ್ಚಾಗುವಂತೆ ಕನಿಷ್ಠ ಬೆಂಬಲ ಬೆಲೆ ಒದಗಿಸುವ ನಿಟ್ಟಿನಲ್ಲಿ ನಿರ್ಧರಿಸಿದೆ. ಸಾಧಾರಣ ಗುಣಮಟ್ಟದ ಇಡೀ ಕೊಬ್ಬರಿಯ ಬೆಂಬಲ ಬೆಲೆಯನ್ನು 250 ರೂ. ಹೆಚ್ಚಿಸುವ ಮೂಲಕ ಕ್ವಿಂಟಾಲ್ ಗೆ 12 ಸಾವಿರ ಆಗುವಂತೆ ಹಾಗೂ ಗಿರಣಿಗೆ ಕೊಡುವ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು 300 ರೂ. ಹೆಚ್ಚಿಸುವ ಮೂಲಕ ಕ್ವಿಂಟಾಲ್ಗೆ 11,160 ರೂ. ಆಗುವಂತೆ ಮಾಡಲಾಗಿದೆ’ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರವು ಇಡೀ ಕೊಬ್ಬರಿಯ ಎಂಎಸ್ಪಿ ಕ್ವಿಂಟಾಲ್ಗೆ 5,250 ಹಾಗೂ ಗಿರಣಿ ಕೊಬ್ಬರಿ ಎಂಎಸ್ಪಿ ಕ್ವಿಂಟಾಲ್ಗೆ 5,500 ರೂ. ಏರಿಸಿದೆ ಎಂದು ಅವರು ತಿಳಿಸಿದಾರೆ.
ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/BV4GiFXeLXJKfXFJFZSiGj
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು…
ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.