Applications have been invited from the government for distribution of drip and sprinkler to the farmers :- ನಮಸ್ಕಾರ ಪ್ರಿಯ ರೈತ ಬಾಂಧವರೇ, ಇಂದಿನ ಲೇಖನದಲ್ಲಿ ನಾವು ರೈತರಿಗೆ ಡ್ರಿಪ್ ಹಾಗೂ ಶಂಕರ್ ಅಳವಡಿಸಿಕೊಳ್ಳಲು ಅರ್ಜಿ ಅಹ್ವಾನ ವಾಗಿದೆ. ಇವತ್ತು ನಾವು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪೂರೈಸುವ ಮೂಲಕ ಹಾಗೂ ಕೃಷಿಯಲ್ಲಿ ನೀರು ನಿರ್ವಹಣೆ ಮಾಡಲು ಸುಲಭವಾಗಿ ನುರು ಅತಿ ಮಿತ‌ ಬಳಕೆಯ ದೃಷ್ಟಿಯಿಂದ ರೈತರಿಗೆ ಡ್ರಿಪ್ ಹಾಗೂ ಸ್ಪಿಂಕ್ಲರ್ ವಿತರಣೆಗೆ ಸರ್ಕಾರದಿಂದ ಅರ್ಜಿ ಆಹ್ವಾನ ಕರೆದಿದ್ದಾರೆ. ರೈತ ಸಂಪರ್ಕ ಕೇಂದ್ರ ಅರಭಾವಿ ಹನಿ ನೀರಾವರಿ/ ತುಂತುರು ನೀರಾವರಿ ಕೃಷಿ ಉಪಕರಣಗಳನ್ನು ಪಡೆಯಲು ಅರ್ಜಿ ಸಲ್ಲಿಸಿ ಕೂಡಲೇ ಈ ಯೋಜನೆಯ ಲಾಭ ಪಡೆಯಲು ಇದೊಂದು ಮಹತ್ವದ ಉದ್ದೇಶ ಆಗಿದೆ.

ಕರ್ನಾಟಕ ಸರ್ಕಾರವು ಕೃಷಿ ಇಲಾಖೆಯ ಅಡಿಯಲ್ಲಿ 2023-24ನೇ ಸಾಲಿನ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ (ಸ್ಪಿಂಕ್ಲರ್) ಘಟಕವನ್ನು ಅಳವಡಿಸಿಕೊಳ್ಳಲು 90% ರಷ್ಟು ಸಹಾಯಧನದ ಅಡಿ ನೀರಾವರಿ ಘಟಕ ವಿತರಣೆಗಾಗಿ ರೈತ-ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರೈತರಿಗೆ ಕೃಷಿ ಹೆಚ್ಚಿನ ಆದಾಯ ಪಡೆಯಲು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗಿರುವ ಸರ್ಕಾರಗಳು ಈಗ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ರೈತರಿಗೆ ಸಬ್ಸಿಡಿ ರೂಪದಲ್ಲಿ ಪೈಪ್ ವಿತರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ರೈತರು ಅರ್ಜಿ ಸಲ್ಲಿಸಿ

ಇದರಲ್ಲಿ ಒಟ್ಟು 30 ಪೈಪ್ ಗಳು ಬರುತ್ತಿದ್ದು, ಇವುಗಳು 20ಫೀಟ್ ಅಥವಾ 6 ಮೀ ಉದ್ದವಾಗಿರುತ್ತವೆ. ಹಾಗೂ ಇದರೊಂದಿಗೆ 5 ಬ್ರಾಸ್ ನಾಸೆಲ್ ಗಳು ಬರುತ್ತವೆ.

ಬೇಕಾಗುವ ಅಗತ್ಯ ದಾಖಲಾತಿಗಳು

1) ಅರ್ಜಿ ನಮೂನೆ

2) ಭಾವಚಿತ್ರ 2

3) ಉತಾರ & ಖಾತೆ ಉತಾರ

4) ಆಧಾರ ಕಾರ್ಡ

5) ಬ್ಯಾಂಕ ಪಾಸಬುಕ್ಕ

6) 20 ರೂ ಬಾಂಡ 1 ಪಾರ್ಟಿ- ರೈತರ ಹೆಸರು

2 ಪಾರ್ಟಿ- ಸಹಾಯಕ ಕೃಷಿ ನಿರ್ದೇಶಕರು ಕಚೇರಿ ಗೋಕಾಕ/ಮೂಡಲಗಿ

7) 20 ರೂ ಬಾಂಡ ಜಂಟಿ ಖಾತೆ ಹೊಂದಿದವರ ರೈತರಗೆ ಮಾತ್ರ

1 ಪಾರ್ಟಿ- ರೈತರ ಹೆಸರು

2 ಪಾರ್ಟಿ- ಸಹಾಯಕ ಕೃಷಿ ನಿರ್ದೇಶಕರು ಕಚೇರಿ ಗೋಕಾಕ/ಮೂಡಲಗಿ

8) ನೀರು& ಬೆಳೆ ಪ್ರಮಾಣ ಪಾತ್ರ

9) ಪಂಚಾಯತಿ ಠರಾವ್

10) ಜಾತಿ ಪ್ರಮಾಣ ಪಾತ್ರ- ಪರಿಶಿಷ್ಟ ಜಾತಿ & ಪಂಗಡ ರೈತರಿಗೆ ಮಾತ್ರ

11) ಆರ್ ಸಿ ಬುಕ ( ಟ್ರಾಕರ್ ಚಾಲಿತ ಉಪಕರಣಗಳಿಗೆ ಮಾತ್ರ)

12) ನಿರಕ್ಷೇಪಣಾ ಪ್ರಮಾಣ ಪತ್ರ ( NOC) – ತೋಟಗಾರಿಕೆ ಇಲಾಖೆಯಿಂದ.

ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾವ ರೈತ ಸಂಪರ್ಕ ಕೇಂದ್ರಗಳಲ್ಲಿ ಯೋಜನೆ ಪ್ರಾರಂಭ ಆಗಿದೆ?

ರೈತ ಸಂಪರ್ಕ ಕೇಂದ್ರ ಅರಭಾವಿ ಇವರ ಸಹಯೋಗದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಆರಂಭವಾಗಿದೆ. ಹಾಗೂ ರೈತರು ಸಹ ಕೂಡಲೇ ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೂಡಲೇ ನೀವು ಸಹ ನಿಮ್ಮ ಹತ್ತಿರ ರೈತ ಸಂಪರ್ಕ ಕೇಂದ್ರಗಳಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಿ ತಪ್ಪದೆ ಇದರ ಸದುಪಯೋಗ ಪಡೆದುಕೊಳ್ಳಿ..

ಹಾವೇರಿ: ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಮಳೆ ಇಲ್ಲದೆ ಭಾರೀ ಸಂಕಷ್ಟವನ್ನು ರೈತ ಎದುರಿಸುತ್ತಿದ್ದಾನೆ. ಈ ಮಧ್ಯೆ ಕೃಷಿ ಉಪಕರಣಗಳಿಗೆ ಪಾವತಿಸಬೇಕಾದ ಹಣವನ್ನು ದುಪ್ಪಟ್ಟು ಮಾಡಿ ಸರ್ಕಾರ ರೈತರಿಗೆ ಶಾಕ್‌ ನೀಡಿದೆ.

ಹೌದು, ರೈತ ಸಂಪರ್ಕ ಕೇಂದ್ರಗಳಿಗೆ ಖರೀದಿಗೆ ಹೋದ ರೈತರು ಕೃಷಿ ಉಪಕರಣ ಬೆಲೆ ಕೇಳಿ ಅಘಾತಗೊಂಡಿದ್ದಾರೆ. ತುಂತುರು ಹಾಗೂ ಹನಿ ನೀರಾವರಿ ಉಪಕರಣಗಳ ಮೇಲಿನ ದರವನ್ನು ದುಪ್ಪಟ್ಟು ಮಾಡಿದೆ. ಕಳೆದ ಅವಧಿಯಲ್ಲಿ 1,876 ರೂ. ರಿಯಾಯಿತಿ ದರ ಪಾವತಿಸಿ 30 ಪೈಪ್‌, 5 ಸ್ಪ್ರಿಂಕ್ಲರ್ ಖರೀದಿಸಬಹುದಿತ್ತು

ಈಗ ಈ ಸರ್ಕಾರದ ಅವಧಿಯಲ್ಲಿ 30 ಪೈಪ್, 5 ಸ್ಪ್ರಿಂಕ್ಲರ್ ಖರೀದಿಗೆ 4,667 ರೂ. ದರ ನಿಗದಿ ಮಾಡಲಾಗಿದೆ. ಏಕಾಏಕಿ ಈ ಪರಿ ದರವನ್ನು ಹೆಚ್ಚಿಸಲು ಕಾರಣ ಏನು ಎನ್ನುವುದು ಗೊತ್ತಿಲ್ಲ. ಹೀಗೆ ದರವನ್ನು ದುಪ್ಪಟ್ಟು ಮಾಡಿದರೆ ನಾವು ಹೇಗೆ ಬದುಕುವುದು ಎಂದು ರೈತರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತ ಸಂಪರ್ಕ ಕೇಂದ್ರಗಳಿಗೆ ಬಂದವರು ಹಣ ಹೊಂದಿಸಲು ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರಿಗೂ ತಿಳಿಯದಂತೆ ಸರ್ಕಾರ ಆದೇಶ ಮಾಡಿದೆ ಎಂದು ಅನ್ನದಾತರು ಸಿಟ್ಟು ಹೊರಹಾಕುತ್ತಿದ್ದಾರೆ.

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/BV4GiFXeLXJKfXFJFZSiGj

ಡ್ರಿಪ್ ಪೈಪ್ ಹಾಗೂ ಸ್ಪ್ರಿಂಕ್ಲೆರ್ ಅರ್ಜಿ ಅಹ್ವಾನ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಡ್ರಿಪ್ ಪೈಪ್ ಹಾಗೂ ಸ್ಪ್ರಿಂಕ್ಲೆರ್ ಅರ್ಜಿ ಅಹ್ವಾನ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ..

➡️ ನಿಮ್ಮ ಸರ್ವೇ ನಂಬರ್ fid ಗೆ ಜೋಡಣೆಯಾಗಿದೆ ಇಲ್ಲವೋ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ👇🏻 https://krushivahini.com/2023/12/16/fid-linked-survey-number-status-check-2/

Leave a Reply

Your email address will not be published. Required fields are marked *