Crop insurance compensation :- 2019 ರಿಂದ 2022 ರ ವರೆಗೆ ಬೆಳೆ ವಿಮೆ ತುಂಬಿದ ರೈತರು ವಿಮಾ ಪರಿಹಾರ ಯಾರಿಗೆ ತಲುಪಿಲ್ಲ ಅವರ ಲಿಸ್ಟ್ ಇದು ಈ ಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿಗಳು ತಮ್ಮ ತಮ್ಮ ತಾಲೂಕಿನ ಕೃಷಿ ಅಧಿಕಾರಿಗಳನ್ನು ಭೇಟಿಯಾದರೆ ನಿಮ್ಮ ಹಳೆಯ ವಿಮಾ ಪರಿಹಾರ ಮೊತ್ತ ನಿಮಗೆ ಜಮಾ ಆಗುತ್ತದೆ ಆದ್ದರಿಂದ ಈ ಪಟ್ಟಿಯನ್ನು ನಿಮಗೆ ಕಳಿಸಿದೆ ದಯಮಾಡಿ ತಾವುಗಳು ಈ ಪಟ್ಟಿಯಲ್ಲಿ ತಮ್ಮ ಹೆಸರಿದ್ದರೆ ತಾವುಗಳು ಈ ಕೂಡದೆ ನಿಮ್ಮ ಕೃಷಿ ಅಧಿಕಾರಿಗಳನ್ನು ಭೇಟಿಯಾಗಿ ಇದಕ್ಕೆ ಪರಿಹಾರ ಕೊಂಡುಕೊಳ್ಳಬೇಕಾಗಿ ಕೋರಲಾಗಿದೆ.

ದಯವಿಟ್ಟು ಈ ಲೇಖನವನ್ನು ತಪ್ಪದೆ ಓದಿ ನಿಮ್ಮ ಜಿಲ್ಲೆಯ ಯಾವ ರೈತರಿಗೆ ಹಳೆಯ ಕಂತಿನ ಬೆಳೆ ವಿಮೆ ಜಮೆಯಾಗಿಲ್ಲ ತಪ್ಪದೇ ನೀವು ನಿಮ್ಮ ಜಿಲ್ಲೆಯ ಕೃಷಿ ಅಧಿಕಾರಿಗಳನ್ನು ಭೇಟಿಯಾಗಬೇಕಾಗಿ ಈ ಮೂಲಕ ತಿಳಿಸುತ್ತೇವೆ.

ಈ ಪಟ್ಟಿಯಲ್ಲಿ ಇರುವ ರೈತರಿಗೆ ಬೆಳೆ ವಿಮೆ ಹಣ ಇನ್ನೂ ಜಮೆಯಾಗಿಲ್ಲ. ತಪ್ಪದೇ ನಿಮ್ಮ ಜಿಲ್ಲೆಯ ವ್ಯಾಪ್ತಿಗೆ ಬರುವ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ನಿಮ್ಮ ಬೆಳೆ ವಿಮೆ ಹಣ ಏಕೆ ಬಂದಿಲ್ಲ ಎಂದು ತಿಳಿದುಕೊಳ್ಳಿ..

➡️ ಆನ್ಲೈನ್ ಮೂಲಕ ಬೆಳೆ ವಿಮೆ ಹಣ ಜಮೆ ಆಗಿರುವುದನ್ನು ಸ್ಟೇಟಸ್ ಚೆಕ್ ಮಾಡುವುದು ಹೇಗೆ ಈ ಕೆಳಗಿನಂತೆ ನೋಡಿರಿ 👇🏻

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/Premium/CheckStatusMain_aadhaar.aspx

ಹಿಂಗಾರು ಬೆಳೆ ವಿಮೆ ನೋಂದಣಿ ಆರಂಭವಾಗಿದೆ..

ನೀವು ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು? ಹಾಗೂ ಎಷ್ಟು ಹಣ ಕಟ್ಟಿದರೆ ಎಷ್ಟು ಪರಿಹಾರ ಧನ ಸಿಗಲಿದೆ ಎಂದು ಒಂದೇ ಕ್ಲಿಕ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

https://samrakshane.karnataka.gov.in/Premium/Crops_You_Can_Insure.aspx

ನಂತರ ನಿಮ್ಮ ವೈಯಕ್ತಿಕ ದಾಖಲೆಗಳನ್ನು ತುಂಬವ ಸಮಯ ಬರುತ್ತದೆ ಅಲ್ಲಿ ನಿಮ್ಮ, ಜಿಲ್ಲೆ , ತಾಲೂಕು ಮತ್ತು ಹೋಬಳಿ ಹಾಗೂ ಗ್ರಾಮ ಯಾವುದು ಎಂದು ಆಯ್ಕೆ ಮಾಡಿ ನಂತರ display ಮೇಲೆ ಕ್ಲಿಕ್ ಮಾಡಿ. ಹೀಗೆ ಮಾಡಿದಾಗ ಕೆಳಗಡೆ ತೋರಿಸಿರುವ ಪೇಜ್ ಓಪನ್ ಆಗುತ್ತದೆ.

ಹೀಗೆ ಮಾಡಿದರೆ ಕೆಳಗಿನಂತೆ ನೀವು ಬೆಳೆ ವಿಮೆ ಕಟ್ಟಲು ಬರುವ ಬೆಳೆ ಹಾಗೂ ಬೆಳೆ ವಿಮೆ ಕಂತು ಎಷ್ಟು ಹಾಗೂ ನಿಮಗೆ ಬರಬೇಕಾದ ಬೆಳೆ ವಿಮೆ ಪರಿಹಾರದ ಮೊತ್ತ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪಾಲಿನ ಕಂತು ಇದರ ಸಂಪೂರ್ಣ ಮಾಹಿತಿ ನಿಮಗೆ ತೋರಿಸುತ್ತದೆ.

ಯಾರಿಗೆ ಎಷ್ಟು ಬೆಳೆ ವಿಮೆ ಹಣ ಜಮೆಯಾಗಲಿದೆ?ನಿಮ್ಮ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿಕೊಳ್ಳಿ..

ಬೆಳೆ ವಿಮೆ ಹಣ ಯಾರಿಗೆ ಎಷ್ಟು ಹಣ ಜಮೆಯಾಗುತ್ತದೆ? ಎಷ್ಟು ಹಣ ರೈತರು ಪಾವತಿಸಬೇಕು ಎಂಬುದನ್ನು ಚೆಕ್ ಮಾಡಲು ಈ ಈ ಕೆಳಗೆ ತೋರಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.

https://samrakshane.karnataka.gov.in/Premium/Premium_Chart.aspx

ಅಲ್ಲಿ ನಿಮಗೆ 2023-24 ಹಾಗೂ Season ನಲ್ಲಿ ಹಿಂಗಾರು/rabi ಎಂದು ಆಯ್ಕೆ ಮಾಡಿ. ನಂತರ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ನಿಮ್ಮ ಗ್ರಾಮ ಆಯ್ಕೆ ಮಾಡಿಕೊಂಡು ನಿಮ್ಮ ಬೆಳೆ ಎಷ್ಟು ಎಕರೆ ಎಂದು ಅಲ್ಲಿ ನಮೂದಿಸಬೇಕು. ನಂತರ ಗುಂಟಾ ನಮೂದಿಸಿ ನಂತರ ಅಲ್ಲಿ ಕಾಣುವ Show Premium(ಶೋ ಪ್ರೈಮಿಯಂ) ಮೇಲೆ ಕ್ಲಿಕ್ ಮಾಡಿ ನೀವು ಚೆಕ್ ಮಾಡಬಹುದು…

➡️ ಹಿಂಗಾರು ಬೆಳೆಗಳಿಗೆ ನೋಂದಣಿ ಪ್ರಾರಂಭ ಹಾಗೂ ಯಾವ ಯಾವ ಬೆಳೆಗೆ ಯಾವುದು ಕೊನೆಯ ದಿನಾಂಕ ಇಲ್ಲಿ ನೋಡಿರಿ..

ಮೊದಲಿಗೆ ಈ ಕೆಳಕಂಡ ಲಿಂಕ್ ಅನ್ನು ಒತ್ತಿರಿ 👇🏻

https://samrakshane.karnataka.gov.in/PublicView/FindCutOff.aspx

ನಂತರ ಅಲ್ಲಿ ಮುಖಪುಟದಲ್ಲಿ ಕಾಣುವಹಾಗೆ ವರ್ಷ, season (ಹಿಂಗಾರು)Rabi ಮತ್ತು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡರೆ. ನೀವು ಬೆಳೆಗಳಿಗೆ ವಿಮೆ ಕಟ್ಟುವ ಕೊನೆಯ ದಿನಾಂಕ ನಿಮಗೆ ಕಾಣಿಸುತ್ತದೆ..

ಮುಂಗಾರು/ಹಿಂಗಾರು ಬೆಳೆ ವಿಮೆ ಪಾವತಿಸುವ ಹಾಗೂ ಪಾವತಿಸಿದ ರೈತರಿಗೆ ಎಷ್ಟು ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಜಮೆಯಾಗಬಹುದು ಎಂಬುದನ್ನು ಸ್ವತಃ ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ..

ನೀವು ನಿಮ್ಮ ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನ ಮೂಲಕ ಕೇವಲ ಒಂದೇ ನಿಮಿಷದಲ್ಲಿ ಯಾವ ಬೆಳೆಗೆ ಎಕರೆಗೆ ಎಷ್ಟು ಬೆಳೆ ವಿಮೆ ಪಾವತಿಸಬೇಕು? ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾನಿಯಾದರೆ ಎಷ್ಟು ವಿಮೆ ಹಣ ಜಮೆಯಾಗಬಹುದು ಎಂಬುದನ್ನು ರೈತರು ಚೆಕ್ ಮಾಡಬಹುದು. ಇಲ್ಲಿದೆ ಮಹತ್ವದ ಮಾಹಿತಿ ತಪ್ಪದೆ ಓದಿರಿ.

ನಿಮ್ಮ ಜಿಲ್ಲೆಯ ಇನ್ಸೂರೆನ್ಸ್(insurance) ಕಂಪನಿ ಯಾವುದು ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಯಾವ ಜಿಲ್ಲೆಗೆ ಯಾವ ಇನ್ಶೂರೆನ್ಸ್ ಕಂಪನಿ ಇರುವ ಬಗ್ಗೆ ಮಾಹಿತಿಯನ್ನು ನೀವು ತಿಳಿದುಕೊಳ್ಳುತ್ತೀರಿ.👇🏻

https://samrakshane.karnataka.gov.in/HomePages/frmKnowYourInsCompany.aspx

ಹೊಸ ಓಪನ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಆಗ ನಿಮ್ಮ ಜಿಲ್ಲೆಯ ಇನ್ಸೂರೆನ್ಸ್ ಕಂಪನಿ ಯಾವುದು ಎಂಬುದರ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ.

➡️ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಮತ್ತು ಕೊನೆ ದಿನಾಂಕ?

ರೈತರು ತಮ್ಮ ಬೆಳೆಗಳಿಗೆ ನಿಮ್ಮ ಸಮೀಪದ ಗ್ರಾಮ ಒನ್ ಸೆಂಟರಗಳಿಗೆ ಭೇಟಿ ನೀಡಿ ಬೆಳೆವಿಮೆ ತುಂಬಲು ರೈತಬಾಂಧವರಲ್ಲಿ ವಿನಂತಿ. ಒಂದು ವೇಳೆ ನೀವು ಮುಂದೆ ನಿಮ್ಮ ಬೆಳೆಗಳ ಪರಿಹಾರವನ್ನು ಸರ್ಕಾರದಿಂದ ಪಡೆಯಬೇಕಾದರೆ ಈ ಬೆಳೆವಿಮೆಯನ್ನು ತುಂಬುವುದು ಅವಶ್ಯಕವಾಗಿದೆ. ಆದ ಕಾರಣ ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ಪ್ರತಿಯೊಂದು ಬೆಳೆಗೆ ತನ್ನದೇ ಆದ ಕೊನೆಯ ದಿನಾಂಕವನ್ನು ನೀಡಿದ್ದಾರೆ. ಕೆಲವೊಂದು ಬೆಳಗೆ ಡಿಸೆಂಬರ್ 1ನೇ ತಾರೀಕು ಕೆಲವೊಂದು ಕೊನೆ ದಿನಾಂಕ ಎಂದು ಸರ್ಕಾರವು ಘೋಷಣೆ ಮಾಡಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು?

ರೈತರು ನಿಮ್ಮ ಆಧಾರ್ ಕಾರ್ಡ್, ನಿಮ್ಮ ಹೊಲದ ಪಹಣಿ ಪತ್ರ, ಬೆಳೆವಿಮೆ ತುಂಬುವ ಅರ್ಜಿ, ನಿಮ್ಮ ಹತ್ತಿರ ಇರುವ ಮೊಬೈಲ್ ಸಂಖ್ಯೆ, ನಿಮ್ಮ FID ನಂಬರ್ ಎಲ್ಲವನ್ನು ನೀವು ತೆಗೆದುಕೊಂಡು ಹೋಗಿ ಗ್ರಾಮವನ್ ಅಥವಾ ಸೇವಾ ಸಿಂಧುವಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗಿ ವಿನಂತಿ.

ನಿಮ್ಮ ಬೆಳೆ ಹಾನಿಯಾಗಿದ್ದರೆ ಯಾರಿಗೆ ದೂರು ನೀಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ…

ಪ್ರಾಕೃತಿಕ ವಿಕೋಪದಿಂದಾಗಿ ರೈತರ ಬೆಳೆ ಹಾನಿಯಾದರೆ ಕೂಡಲೇ ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದಾರೋ ಆ ವಿಮಾ ಕಂಪನಿಗೆ 72 ಗಂಟೆ ಒಳಗಡೆ ತಿಳಿಸಬೇಕು. ಆಗ ನೀವು ಸಲ್ಲಿಸಿದ ನಿಮ್ಮ ದೂರು ದಾಖಲು ಮಾಡಿಕೊಳ್ಳುತ್ತಾರೆ. ನಂತರ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ನಿಮ್ಮ ಜಮೀನಿಗೆ ಬಂದು ಬೆಳೆ ಪರಿಶೀಲನೆ ಮಾಡಿ ಬೆಳೆ ವಿಮೆ ಪರಿಹಾರ ವರದಿ ಸಲ್ಲಿಸುತ್ತಾರೆ.

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ🙏🏻. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/HLCYrALalJpLbeEMnLRyZB

ಬೆಳೆ ವಿಮೆ ಪರಿಹಾರ ಈ ರೈತರಿಗೆ ಬಂದಿಲ್ಲ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬೆಳೆ ವಿಮೆ ಪರಿಹಾರ ಈ ರೈತರಿಗೆ ಬಂದಿಲ್ಲ ಹಾಗೂ ಕಂತು ಪಾವತಿಸುವ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️ ನಿಮ್ಮ ಬೆಳೆ ಸಮೀಕ್ಷೆ ಸ್ಟಿತಿ ಹೇಗಿದ್ದರೆ ಮಾತ್ರ ಪರಿಹಾರ ಹಣ ಬರುತ್ತದೆ 👇🏻👇🏻

➡️ ಬೆಳೆ ಸಮೀಕ್ಷೆಯ ಸ್ಥಿತಿ ಹೀಗಿದ್ದರೆ ಮಾತ್ರ ನಿಮಗೆ ಪರಿಹಾರದ ಹಣ ಬರುತ್ತದೆ! ಬರ ಪರಿಹಾರ ಪಡೆಯಲು ಈ ಕೆಲಸ ಕಡ್ಡಾಯ ತಪ್ಪದೇ ನೋಡಿ https://krushivahini.com/2023/11/20/check-bele-samikshe-status/

➡️ ಈ ಜಿಲ್ಲೆಯ ರೈತರ ಖಾತೆಗೆ ಬೆಳೆ ವಿಮೆ ಹಣ ಜಮೆಯಾಗಿದೆ! ನಿಮಗೆ ಎಷ್ಟು ಮಧ್ಯಂತರ ಪರಿಹಾರ ಬಂದಿದೆ, ಇಲ್ಲಿ ಚೆಕ್ ಮಾಡಿಕೊಳ್ಳಿ 👇🏻👇🏻 https://krushivahini.com/2023/11/19/crop-insurance-released/

➡️ ಈ ದಿನ ಬರಲಿದೆ ರೈತರಿಗೆ ಬರ ಪರಿಹಾರ ಹಣ ಸಾಧಾರಣ ಹಾಗೂ ತೀರ್ವ ಬರಪೀಡಿತ ತಾಲೂಕು ಎಷ್ಟು ಪರಿಹಾರವನ್ನು ಕೊಡುತ್ತಾರೆ👇🏻https://krushivahini.com/2023/11/18/this-work-is-mandatory-to-get-drought-relief-2/

Leave a Reply

Your email address will not be published. Required fields are marked *