Tomato rate increased :- ಮಂಡ್ಯ: ಕಳೆದ ನಾಲೈದು ದಿನಗಳಿಂದ ಹವಾಮಾನ ವೈಪರೀತ್ಯ ಉಂಟಾಗಿದ್ದು ಕೆಲವು ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಟೊಮೆಟೊ ಬೆಲೆ ಕೆ.ಜಿ 40ಕ್ಕೆ ಏರಿಕೆಯಾಗಿದ್ದು ಗ್ರಾಹಕರಿಗೆ ಹೊರೆ ಉಂಟಾಗಿದೆ.

ನಮಸ್ಕಾರ ಆತ್ಮೀಯ ರೈತ ಬಾಂಧವರೇ, ಇಂದಿನ ಲೇಖನದಲ್ಲಿ ನಾವು ಟೊಮೊಟೊ ಬೆಲೆ ಮತ್ತೆ ಏರಿಕೆಯಾಗುತ್ತಾ?? ಟೊಮ್ಯಾಟೋ ಬೆಳೆಗಾರರಿಗೆ ಮತ್ತೆ ಸಿಹಿ ಸುದ್ದಿ ಸಿಗಲಿದೆಯಾ?? ಮತ್ತೆ ನೂರರ ಗಡಿ ದಾಟುತ್ತಾ ಟೊಮೊಟೊ ಬೆಲೆ?? ತಪ್ಪದೇ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಇತರರಿಗೂ ಶೇರ್ ಮಾಡಿ 👇🏻

ಹೌದು ರೈತ ಬಾಂಧವರೇ, ನೀವು ತಿಳಿದ ಹಾಗೆ ಹಿಂದಿನ ಎರಡು ತಿಂಗಳಲ್ಲಿ ಟೊಮೊಟೊ ಕೃಷಿ ಮಾಡಿ ಕೋಟಿ ರೂ ಸಂಪಾದಿಸಿದ ರೈತರ ಬಹಳಷ್ಟು ಉದಾಹರಣೆಗಳನ್ನು ನೀವು ನೋಡಿದ್ದೀರಿ. ಇದೀಗ ಮತ್ತೆ ಟೊಮೊಟೊ ಬೆಲೆ ಇರುತ್ತದೆ ಎಂದು ವದಂತಿಗಳು ಹರಡುತ್ತಿವೆ. ಹಾಗಾದರೆ ಯಾವಾಗ ಟೊಮ್ಯಾಟೋ ಬೆಲೆ ಏರಿಕೆಯಾಗುತ್ತದೆ? ಟೊಮೇಟೊ ಬೆಲೆ ಮತ್ತೆ ಏರಿಕೆ ಆದರೆ ಎಷ್ಟು ದರ ಸಿಗುತ್ತದೆ??

ದೀಪಾವಳಿ ಸಮೀಪಿಸುತ್ತಿದ್ದಂತೆ ಕೊಂಚ ಚಳಿ ಆರಂಭವಾಗಿದ್ದು ಟೊಮೆಟೊ ಬೆಳೆ ಮೇಲೆ ಪರಿಣಾಮ ಬೀರಿದೆ. ರೈತರು ತೀವ್ರ ಬಿಸಿಲಿನ ಕಾರಣಕ್ಕೆ ಟೊಮೆಟೊ ಬೆಳೆಗೆ ಔಷಧಿ ಸಂಪಡಣೆ ಮಾಡಿದ್ದರು. ಆದರೆ ಈಗ ಚಳಿ ಆರಂಭವಾಗಿರುವ ಕಾರಣ ಟೊಮೆಟೊ ಹಣ್ಣುಗಳು ಗಿಡದಲ್ಲಿಯೇ ಕರಗಿ ಹೋಗುತ್ತಿವೆ. ಹೀಗಾಗಿ ಸ್ಥಳೀಯ ಹಣ್ಣು ಮಾರುಕಟ್ಟೆಗೆ ಬಾರದ ಕಾರಣ ಬೆಲೆ ಏರಿಕೆಯಾಗಿದೆ.

2 ತಿಂಗಳ ಹಿಂದಷ್ಟೇ ಟೊಮೆಟೊ ಬೆಲೆ 100ರ ಗಡಿ ದಾಟಿ ಇಳಿಕೆ ಕಂಡಿತ್ತು, 710- 320ಕ್ಕೆ ಟೊಮೆಟೊ ದೊರೆಯುತ್ತಿತ್ತು. ಆದರೆ ಈಗ ಮತ್ತೆ ಏರುಗತಿಯಲ್ಲಿ ಸಾಗುತ್ತಿದೆ. ದೀಪಾವಳಿ ದಿನ ಕೆ.ಜಿ 25ಕ್ಕೆ ದೊರೆಯುತ್ತಿತ್ತು. ಈಗ ಇನ್ನಷ್ಟು ಹೆಚ್ಚಳವಾಗಿದ್ದು ಉತ್ತಮ ಗುಣಮಟ್ಟದ ಟೊಮೆಟೊ 1ಕೆಜಿ ಗೆ 40ಕ್ಕೆ ಮಾರಾಟವಾಗುತ್ತದೆ.

‘ನಾಲ್ಕು ದಿನಗಳ ಹಿಂದಷ್ಟೇ ಬೇಸಿಗೆಯಂತಹ ಬಿಸಿಲು ಇತ್ತು. ಈಗ ಏಕಾಏಕಿ ಚಳಿ ಆರಂಭವಾಗಿದ್ದು ಟೊಮೆಟೊ ಗಿಡಗಳು ಮುದುಡಿ ಹೋಗುತ್ತಿವೆ. ಹೀಗಾಗಿ ಹಣ್ಣು ಮಾರುಕಟ್ಟೆಗೆ ಬಾರದ ಕಾರಣ ಬೆಲೆ ಏರಿಕೆಯಾಗಿದೆ‘ ಎಂದು ವ್ಯಾಪಾರಿ ತೌಫೀಕ್ ಹೇಳಿದರು.

ಟೊಮೆಟೊ ಬಿಟ್ಟರೆ ಇತರ ತರಕಾರಿ ಬೆಲೆ ನಿಯಂತ್ರಣಕ್ಕೆ ಬಂದಿದೆ. ಮುಖ್ಯವಾಗಿ 100 ಗಡಿ ತಲುಪಿದ್ದ ಬೀನ್ಸ್ ಬೆಲೆ ಈಗ 7 60ರಂತೆ ಮಾರಾಟವಾಗುತ್ತಿದೆ. ಸೌತೆಕಾಯಿ, ಎಲೆಕೋಸು 7 25ರಂತೆ ಕೆ.ಜಿ ದೊರೆಯುತ್ತಿದೆ. ಬೆಂಡೆಕಾಯಿ, ಸೋರೆಕಾಯಿ, ಪಡವಲಕಾಯಿ, ಆಲೂಗಡ್ಡೆ 130ರಂತೆ ಮಾರಾಟವಾಗುತ್ತಿವೆ.

ಭಜಿ ಮೆಣಸಿನಕಾಯಿ, ಕ್ಯಾರೆಟ್, ಸೀಮೆಬದನೆಕಾಯಿ, ಹಾಗಲಕಾಯಿ, ಹೂಕೋಸು, ಅವರೆಕಾಯಿ, ಈರೇಕಾಯಿ, ಮೂಲಂಗಿ, ತೊಂಡೆಕಾಯಿ, ಬೀಟ್‌ರೂಟ್, ಸಿಹಿಗೆಣಸು, ಮರಗಣೆಸು, ಮಂಗಳೂರು ಸೌತೆ 140, ಸುವರ್ಣಗೆಡ್ಡೆ, ಈರುಳ್ಳಿ

750ರಂತೆ ಮಾರಾಟವಾಗುತ್ತಿವೆ. ಹಸಿರು ಮೆಣಸಿನಕಾಯಿ, ತಗಣಿಕಾಯಿ 360, ಶುಂಠಿ 60, ಫಾರಂ ಬೀನ್ಸ್, ಗೆಡ್ಡೆಕೋಸು 780, ನುಗ್ಗೇಕಾಯಿ, ನಾಟಿ ಬೀನ್ಸ್, ದಪ್ಪಮೆಣಸಿನಕಾಯಿ 100, ಹಸಿಬಟಾಣಿ 120, ಫಾರಂಬೆಳ್ಳುಳ್ಳಿ 160, ನಾಟಿ ಬೆಳ್ಳುಳ್ಳಿ 180ರಂತೆ ಮಾರಾಟವಾಗುತ್ತಿವೆ. ಒಂದು ನಿಂಬೆಹಣ್ಣು‍ 5 ರಿಂದ 10ರವರೆಗೂ ಮಾರಾಟವಾಗುತ್ತಿದೆ.

ಸೊಪ್ಪುಗಳ ಬೆಲೆ ನಿಯಂತ್ರಣದಲ್ಲಿದ್ದು ಕೀರೆ 7 10, ದಂಟು, ಪಾಲಾಕ್, ಕರಿಬೇವು – 15, ಸಬ್ಬಸಿಗೆ, ಫಾರಂ ಕೊತ್ತಂಬರಿ, ಕಿಲ್ ಕೀರೆ 7 20, ಚಿಕ್ಕಿಸೊಪ್ಪು, ನಾಟಿ ಕೊತ್ತಂಬರಿ 125ಕ್ಕೆ ಒಂದು ಕಟ್ಟು ಮಾರಾಟವಾಗುತ್ತಿವೆ. ಮೆಂತೆ ಸೊಪ್ಪಿನ ಬೆಲೆ ಕೂಡ ಏರಿಕೆಯಾಗಿದ್ದು 340ರಂತೆ ಪ್ರತಿ ಕಟ್ಟಿಗೆ ಮಾರಾಟವಾಗುತ್ತಿವೆ.

➡️ ದೀಪಾವಳಿ ಹಬ್ಬದಿಂದ ಮತ್ತೆ ಏರಿಕೆಯಾಗಲಿದೆ ಹೂಗಳ ಬೆಲೆ?

ದೀಪಾವಳಿ ಅಂಗವಾಗಿ ಹೂವುಗಳಲ್ಲಿ ಮಲ್ಲಿಗೆ, ಕನಕಾಂಬರ, ಕಾಕಡ ಹೂ ದುಬಾರಿಯಾಗಿದೆ. ಕೆ.ಜಿ ಕೆಂಪು ಚೆಂಡುಹೂ ಮತ್ತು ಹಳದಿ ಚೆಂಡು ಹೂ 750, ಬಿಳಿ ಸೇವಂತಿಗೆ 230, ಸೇವಂತಿಗೆ, ಬಟನ್ಸ್ 250, ಸಣ್ಣಗುಲಾಬಿ 300, ಸುಗಂಧರಾಜ 400, ಗಣಗಲೆ, ಕಲ್ಕತ್ತಾ ಮಲ್ಲಿಗೆ 500, ಮರಳೆ 600, ಕಾಕಡ 800, ಮಲ್ಲಿಗೆ ‍1 ಸಾವಿರ, ಕನಕಾಂಬರ 1,200ದವರೆಗೂ ಮಾರಾಟವಾಗುತ್ತಿವೆ.

ಮಾರು ತುಳಸಿ 730- 40, ಹಳದಿ ಚೆಂಡುಹೂ ಮತ್ತು ಕೆಂಪು ಚೆಂಡು ಹೂ 360, ಕಾಕಡ, ಗಣಗಲೆ 380, ಸೇವಂತಿಗೆ ‍30- 50, ಬಟನ್ಸ್ 160, ಗಣಗಲೆ, ಕಾಕಡ 380, ಕನಕಾಂಬರ 3100 ರಂತೆ ಒಂದು ಮಾರಿಗೆ ಮಾರಾಟವಾಗುತ್ತಿವೆ.

ಹಣ್ಣುಗಳಲ್ಲಿ ದಾಳಿಂಬೆ, ಶಿಮ್ಲಾ ಮತ್ತು ದೆಹಲಿ ಸೇಬಿನ ಬೆಲೆ ಹೆಚ್ಚಳವಾಗಿದೆ. ಪಪ್ಪಾಯ 725, ಕಲ್ಲಂಗಡಿ 730, ಪಚ್ಚಬಾಳೆ,

ಕರಬೂಜ ‍40, ಸಪೋಟ 150, ಅನಾನಸ್, ಸೀಬೆ, ಸೀತಾಫಲ 160, ಕಿತ್ತಳೆ, ಮೂಸಂಬಿ 780, ಏಲಕ್ಕಿ ಬಾಳೆ 370 – 380, ಕಂದ್ರಾಕ್ಷಿ ‍120, ಕಪ್ಪು ದ್ರಾಕ್ಷಿ 1130, ಕಿವಿಹಣ್ಣು (ಬಾಕ್ಸ್) 1140,ದಪ್ಪದ್ರಾಕ್ಷಿ, ಕಿತ್ತಳೆ 1180, ಶಿಮ್ಲಾ ಮತ್ತು ದೆಹಲಿ ಸೇಬು 7160-7200, ದಾಳಿಂಬೆ 3270 ರಂತೆ ಪ್ರತಿ ಕೆ.ಜಿಗೆ ಮಾರಾಟವಾಗುತ್ತಿವೆ.

ಚಳಿಯ ಮುನ್ಸೂಚನೆ; ಬೆಳೆ ಮೇಲೆ ಪರಿಣಾಮ ನಿಯಂತ್ರಣಕ್ಕೆ ಬಂದ ಬಹುತೇಕ ತರಕಾರಿ ದರ ಹಬ್ಬದ ಅಂಗವಾಗಿ ಹೂವುಗಳ ಬೆಲೆಯಲ್ಲಿ ಏರಿಕೆ..

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/HLCYrALalJpLbeEMnLRyZB

ಮತ್ತೆ ಏರಿಕೆಯಾಗುತ್ತಾ ಟೊಮೇಟೊ ಬೆಲೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಮತ್ತೆ ಏರಿಕೆಯಾಗುತ್ತಾ ಟೊಮೇಟೊ ಬೆಲೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ🙏🏻.(krushivahini) ಸದಾ ರೈತರ ಸೇವೆಯಲ್ಲಿ.

➡️ ಈ ದಿನ ಬರಲಿದೆ ರೈತರಿಗೆ ಬರ ಪರಿಹಾರ ಹಣ ಸಾಧಾರಣ ಹಾಗೂ ತೀರ್ವ ಬರಪೀಡಿತ ತಾಲೂಕು ಎಷ್ಟು ಪರಿಹಾರವನ್ನು ಕೊಡುತ್ತಾರೆ👇🏻https://krushivahini.com/2023/11/18/this-work-is-mandatory-to-get-drought-relief-2/

➡️ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಒಟ್ಟು 783 ಕೋಟಿ ಲಭ್ಯವಿದೆ‘ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು👇🏻https://krushivahini.com/2023/11/16/783-crore-available-in-district-magistrates-pdi-account/

Leave a Reply

Your email address will not be published. Required fields are marked *