ನಮಸ್ಕಾರ, ಪ್ರಿಯ ರೈತ ಬಾಂಧವರೇ ಇಂದು ನಾವು

ನಿಮ್ಮ ಉತಾರಿಯಲ್ಲಿ ಹೊಲದ ಮಾಲೀಕರ ಹೆಸರನ್ನು ತಿದ್ದುಪಡಿ ಮಾಡುವುದು ಹೇಗೆ?

ಹೆಸರನ್ನು ತಿದ್ದುಪಡಿ ಎಲ್ಲಿ ಮಾಡಬೇಕು?

ಅದರ ಪ್ರಕ್ರಿಯೆ ಏನು?

ನಿಮ್ಮ ಜಮೀನಿನ ಪಹಣಿಯಲ್ಲಿ ಹೆಸರನ್ನು ತಿದ್ದುಪಡಿ ಮಾಡುವುದರಿಂದ ಆಗುವ ಉಪಯೋಗಗಳೇನು?

ಇವೆಲ್ಲವುಗಳ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.

ಹೌದು, ಏನಿದು ಪಹಣಿ ತಿದ್ದುಪಡಿ? ಯಾವ ದಾಖಲೆಗಳು ಬೇಕು?

ಪಹಣಿಯಲ್ಲಿ ಹೆಸರನ್ನು ತಿದ್ದುಪಡಿ ಮಾಡಲು ಕೆಲವು ದಾಖಲೆಗಳ ಅವಶ್ಯಕತೆ ಇರುತ್ತದೆ. ತಪ್ಪದೆ ಈ ಕೆಳಗೆ ಸೂಚಿಸಿರುವ ದಾಖಲೆಗಳನ್ನು ನೋಡಿ.

ಪಹಣಿ ತಿದ್ದುಪಡಿ ಮಾಡಲು ಬೇಕಾಗುವ ದಾಖಲೆಗಳು?

• 1964 ರಿಂದ ಇಲ್ಲಿಯವರೆಗೆ ಪ್ರತಿವರ್ಷದ ಪಹಣಿಯನ್ನು ನೀವು ತೆಗೆದುಕೊಂಡು ಇಟ್ಟುಕೊಳ್ಳಬೇಕು. ನೀವು ಇದನ್ನು ತಾಲೂಕಿನ ತಹಶೀಲ್ದಾರ್ ಆಫೀಸ್ ನಲ್ಲಿ ಇರುವ ಪಹಣಿ ಕೇಂದ್ರದಲ್ಲಿ ಇದು ಸಿಗುತ್ತದೆ.

• 20 ರೂಪಾಯಿಯ ಈ ಸ್ಟ್ಯಾಂಪ್ ಪೇಪರ್ ಮಾಡಿಸಬೇಕು. ಅದರ ಮೇಲೆ ವಕೀಲರಿಂದ ತಪ್ಪದೇ ನೋಟರಿ ಮಾಡಿಸಬೇಕು.

• ಪಹಣಿಯಲ್ಲಿರುವ ಹೆಸರು ತಿದ್ದುಪಡಿಗೋಸ್ಕರ ಮಾದರಿ ಅರ್ಜಿ ಬರೆಯಬೇಕು. ಅದರಲ್ಲಿ ನೀವು ಪಹಣಿಯಲ್ಲಿ ಯಾವ ವಿಷಯಕ್ಕೆ ತಿದ್ದುಪಡಿ ಮಾಡಿಸುತ್ತಿರೋ ಎಂಬುದನ್ನು ಸ್ಪಷ್ಟವಾಗಿ ಅನುಮೋದಿಸಬೇಕು.

ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಹೊಂದಿರಬೇಕು.

ಈ ಮೇಲೆ ಹೇಳಿರುವ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು ನಿಮ್ಮ ತಾಲೂಕಿನಲ್ಲಿರುವ ಭೂಮಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು.

ಪಹಣಿ ತಿದ್ದುಪಡಿಯನ್ನು ಹೇಗೆ ಮಾಡಬೇಕು?

ಅದರ ಪ್ರಕ್ರಿಯೆ ಏನು?

• ಭೂಮಿ ಕೇಂದ್ರದಲ್ಲಿರುವ ಅಧಿಕಾರಿಗಳು ನಿಮ್ಮ ಸದರಿ ದಾಖಲೆಗಳನ್ನು ನಿಮಗೆ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಳುಹಿಸುತ್ತಾರೆ.

• ಗ್ರಾಮ ಲೆಕ್ಕಾಧಿಕಾರಿಗಳು ತಮಗೆ ಬಂದಿರುವ ಪಹಣಿ ಅರ್ಜಿಯನ್ನು ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ.

• ದಾಖಲೆಗಳು ತಪ್ಪಾಗಿದ್ದಲ್ಲಿ ಅದನ್ನು ತಿರಸ್ಕರಿಸುವ ಹಕ್ಕನ್ನು ಹೊಂದಿರುತ್ತಾರೆ. ಒಂದು ವೇಳೆ ಎಲ್ಲಾ ದಾಖಲೆಗಳು ಸರಿಯಾಗಿದ್ದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪಹಣಿ ತಿದ್ದುಪಡಿ ಮಾಡಲು ಭೂಮಿ ಕೇಂದ್ರಕ್ಕೆ ಆದೇಶಿಸುವ ಹಕ್ಕನ್ನು ಹೊಂದಿರುತ್ತಾರೆ.

• ಗ್ರಾಮ ಲೆಕ್ಕಾಧಿಕಾರಿಗಳ ಆದೇಶದ ಮೇಲೆ ಭೂಮಿ ಕೇಂದ್ರದ ಅಧಿಕಾರಿಗಳು ನಿಮ್ಮ ಪಹಣಿಯಲ್ಲಿರುವ ಹೆಸರನ್ನು ತಿದ್ದುಪಡಿ ಮಾಡುತ್ತಾರೆ. ಸುಮಾರು ದಿನಗಳ ನಂತರ ತಿದ್ದುಪಡಿ ಆಗಿರುವ ಹೊಸ ಪಹಣಿ ನಿಮ್ಮ ಕೈ ಸೇರುತ್ತದೆ.

ಈ ರೀತಿಯಾಗಿ ನೀವು ಪಹಣಿಯಲ್ಲಿರುವ ಹೆಸರನ್ನು ತಿದ್ದುಪಡಿ ಮಾಡಬಹುದು.

ಪಹಣಿಯಲ್ಲಿ ಹೆಸರನ್ನು ತಿದ್ದುಪಡಿ ಮಾಡುವುದರಿಂದ ನಮಗಾಗುವ ಉಪಯೋಗಗಳೇನು?

• ಜಮೀನನ್ನು ಕೊಂಡುಕೊಳ್ಳುವಾಗ ಅಥವಾ ಮಾರುವಾಗ ಅಥವಾ ಭಾಗ ಮಾಡುವಾಗ ಯಾವುದೇ ಗೊಂದಲ ಉಂಟಾಗುವುದಿಲ್ಲ.

• ಇವತ್ತಿನ ದಿನದಲ್ಲಿ ಯಾವುದೇ ಒಂದು ಸರ್ಕಾರಿ ಕೆಲಸಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗಿರುವುದರಿಂದ ಸರ್ಕಾರದಿಂದ ಸಿಗುವ ಸಹಾಯಧನ ಸರಿಯಾದ ಸಮಯಕ್ಕೆ ಸಿಗಬೇಕೆಂದರೆ ಪಹಣಿ ತಿದ್ದುಪಡಿಯ ಅವಶ್ಯಕತೆ ಇರುತ್ತದೆ.

• ಇದರ ಮುಖ್ಯ ಲಾಭ ಎಂದರೆ ಪಿಎಂ ಕಿಸಾನ್ ಆಗಲಿ ಅಥವಾ ಸರ್ಕಾರದ ಬೇರೆ ಯಾವುದೋ ಯೋಜನೆಯಿಂದ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರಲು ಪಹಣಿಯಲ್ಲಿ ತಿದ್ದುಪಡಿ ಮಾಡುವುದು ಅವಶ್ಯಕತೆ ಇರುತ್ತದೆ.

• ನೀವು ಬ್ಯಾಂಕಿನಲ್ಲಿ ಬೆಳೆ ಸಾಲ ತೆಗೆದುಕೊಳ್ಳುವಾಗ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮತ್ತು ನಿಮ್ಮ ಪಹಣಿಯಲ್ಲಿರುವ ಹೆಸರು ಸರಿ ಹೊಂದಬೇಕಾಗುತ್ತದೆ. ಇದಕ್ಕಾಗಿ ಪಹಣಿ ತಿದ್ದುಪಡಿ ಮಾಡುವುದು ತುಂಬಾ ಅವಶ್ಯಕವಾಗಿರುತ್ತದೆ.

ಇದಿಷ್ಟು ಪಹಣಿ ತಿದ್ದುಪಡಿಯ ಬಗ್ಗೆ ಇರುವ ಸಂಪೂರ್ಣ ಮಾಹಿತಿಯಾಗಿದ್ದು ರೈತರು ಈ ಉಪಯುಕ್ತ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಇದರ ಲಾಭವನ್ನು ಪಡೆದುಕೊಳ್ಳಬೇಕು..

: ಸರ್ಕಾರಿ ಯೋಜನೆಗಳು :

👉🏻 ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ ಮತ್ತು ಬೇಕಾಗುವ ದಾಖಲೆಗಳನ್ನು ಇಲ್ಲಿ ನೋಡಿ

👉🏻 ಗ್ರಹಲಕ್ಷ್ಮಿ ಯೋಜನೆಯಲ್ಲಿ 2,000 ಹಣ ಯಾರ ಹೆಸರಿಗೆ ಬರುತ್ತದೆ ಎಂದು ಮೊಬೈಲ್ ನಲ್ಲಿ ತಿಳಿದುಕೊಳ್ಳಿ

👉🏻 ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ನಂಬರ್ ಅನ್ನು ಲಿಂಕ್ ಮೊಬೈಲ್ನಲ್ಲಿ ಮಾಡಿರಿ

👉🏻 ಗೃಹಲಕ್ಷ್ಮಿ ಯೋಜನೆಯನ್ನು ಮನೆಯಲ್ಲಿ ಕುಳಿತುಕೊಂಡು ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಿ

👉🏻 ಈ 11 ಜಿಲ್ಲೆಗಳಿಗೆ ಮುಂದಿನ ದಿನದಲ್ಲಿ ಹೆಚ್ಚಿನ ಮಳೆ ಸಾಧ್ಯತೆ ನಿಮ್ಮ ಜಿಲ್ಲೆ ಇದೆ ನೋಡಿರಿ

👉🏻 ಮುಳ್ಳು ಸಜ್ಜೆ ಕಸವನ್ನು ನಿಯಂತ್ರಣ ಮಾಡಲು ಕಳೆನಾಶಕ ಬಂದಿದೆ

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳನ್ನು ತಿಳಿಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇🏻

https://chat.whatsapp.com/K9mNNO3T6FzKJGch4oqd2m

Leave a Reply

Your email address will not be published. Required fields are marked *