Do Crop survey get 27000/-
ಆತ್ಮೀಯ ರೈತ ಬಾಂಧವರೇ, ಕಳೆದ ವರ್ಷ ಅತಿವೃಷ್ಟಿಯ ಕಾರಣಗಳಿಂದಾಗಿ ಬಹುತೇಕ ರೈತರ ಬೆಳೆದಂತ ಬೆಳೆಗಳು ಹಾನಿಯಾಗಿದ್ದವು ಅದಕ್ಕಾಗಿ ಸರ್ಕಾರವು ರೈತರಿಗೆ ಬೆಳೆ ಪರಿಹಾರವನ್ನು ಅಂದರೆ ಒಬ್ಬ ರೈತನಿಗೆ ಗರಿಷ್ಠ 27 ಸಾವಿರ ರೂಪಾಯಿಗಳನ್ನು ( ಮಳೆಯಾಶ್ರಿತ ) ಭೂಮಿಗಳಿಗೆ ನೀಡಲಾಗಿತ್ತು.
ಆದರೆ ಕೆಲವೊಂದಿಷ್ಟು ರೈತರು ಬೆಳೆ ಸಮೀಕ್ಷೆಯನ್ನು ಮಾಡದ ಕಾರಣಗಳಿಂದಾಗಿ ಅವರಿಗೆ ಬೆಳೆ ಪರಿಹಾರವನ್ನು ನೀಡಲು ಆಗಿದ್ದಿಲ್ಲ, ಆದ್ದರಿಂದ ಈ ಬಾರಿ ರೈತರು ತಪ್ಪದೆ ಬೆಳೆ ಸಮೀಕ್ಷೆಯನ್ನು ಮಾಡಿ ಬೆಳೆ ಪರಿಹಾರವನ್ನು ಪಡೆಯಬೇಕಾಗಿ ವಿನಂತಿ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಈಗಾಗಲೇ ಪ್ರಾರಂಭವಾಗಿದ್ದು, ರೈತರು ತಾವು ಬೆಳೆದ ಬೆಳೆಗಳ ವಿವರವನ್ನು ತಾವೇ ಖುದ್ದಾಗಿ ದಾಖಲಿಸಬೇಕು ಎಂದು ಸೂಚಿಸಲಾಗಿದೆ.
ಮೊದಲಿಗೆ ಗೂಗಲ್ ಪ್ಲೇಸ್ಟೋರ್ನಿಂದ ಮುಂಗಾರು ರೈತರ ಬೆಳೆ ಸಮೀಕ್ಷೆ 2023 ಅನ್ನು ಡೌನ್ ಲೋಡ್ ಮಾಡಿಕೊಂಡು ಬೆಳೆ ವಿವರ ದಾಖಲಿಸಬೇಕು.
ಮುಂಗಾರು ರೈತರ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ👇🏻.
https://play.google.com/store/apps/details?id=com.csk.farmer23_24.cropsurvey
ಬೆಳೆ ಸಮೀಕ್ಷೆ ಮಾಡುವುದರಿಂದ ನಮಗೆ ಸಿಗುವ ಲಾಭಗಳೇನು?
*ಕನಿಷ್ಠ ಬೆಂಬಲ ಬೆಲೆ ಯೋಜನೆ,
*ಬೆಳೆ ವಿಮೆ ಯೋಜನೆ,
*ಬರಗಾಲ “ಮತ್ತು ಪ್ರವಾಹಸಂದರ್ಭದಲ್ಲಿ ನಷ್ಟ ಪರಿಹಾರ ಪಡೆಯಲು
*ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು
*ಬೆಳೆಸಾಲ ಅನುಕೂಲವಾಗುವದರಿಂದ ಎಲ್ಲ ವಿವರಗಳನ್ನು ತ್ವರಿತವಾಗಿ ಬೆಳೆ ಸಮೀಕ್ಷೆ ದಾಖಲಿಸಿ ಪಡೆದುಕೊಳ್ಳಬೇಕಿದೆ.
ಅಪ್ಲೋಡ್ ಮಾಡದಿದ್ದಲ್ಲಿ ಯೋಜನೆಗಳ ಸದುಪಯೋಗ ಲಾಭದಿಂದ ವಂಚಿತರಾಗುವ ಸಾಧ್ಯತೆ ಇದೆ. ಇದನ್ನು ಮತ್ತು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ವಿವರಗಳನ್ನು ಪಡೆಯುವಲ್ಲಿ ದಾಖಲಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ರೈತರು ಬೆಳೆ ತಾರಾಮಣಿ ಜಿ.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಗ್ರಾಮದ ಖಾಸಗಿ ನಿವಾಸಿಗಳು, ಕಂದಾಯ/ಕೃಷಿ/ ರೈತರು ಬೆಳೆ ವಿವರಗಳನ್ನು ತೋಟಗಾರಿಕೆ/ರೇಷ್ಮೆ ಇಲಾಖೆಗಳ ಅಧಿಕಾರಿಗಳನ್ನು ಮೇಲೆ ತಿಳಿಸಿದ ಸಂಪರ್ಕಿಸಬಹುದು ಮೊ/8448447715 ಗೆ ಕರೆ ಮಾಡಲು ಕೋರಿದೆ.
ತಪ್ಪದೆ ಓದಿರಿ
👉🏻 ನಿಮ್ಮ ಉತಾರೆಯಲ್ಲಿ ಹೊಲದ ಮಾಲೀಕನ ಹೆಸರನ್ನು ತಿದ್ದುಪಡಿ ಮಾಡುವುದು?
👉🏻 ಗೃಹಜೋತಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಅನ್ನು ಮೊಬೈಲ್ನಲ್ಲಿಯೇ ಚೆಕ್ ಮಾಡಿ
👉🏻 ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಮನೆಯಲ್ಲಿಯೇ ಕುಳಿತು ಚೆಕ್ ಮಾಡಿ
👉🏻 ಗೃಹಲಕ್ಷ್ಮಿ ಯೋಜನೆಯ 2000 ರೂ ಹಣ ಯಾರ ಹೆಸರಿಗೆ ಬರುತ್ತದೆ ಎಂದು ನೋಡಿರಿ
👉🏻 ಮೆಕ್ಕೆಜೋಳದಲ್ಲಿ ಮುಳ್ಳು ಸಜ್ಜೆ ಗೆ ಕಳೆನಾಶಕ ಬಂದಿದೆ
👉🏻 ಮೊಬೈಲ್ ನಲ್ಲಿ ರೇಷನ್ ಕಾರ್ಡ್ ಗೆ ಆಧಾರ್ ನಂಬರ್ ಲಿಂಕ್ ಮಾಡುವುದು ಹೇಗೆ ಅಂತ ನೋಡಿರಿ
ಪ್ರಮುಖ ಲಿಂಕ್ ಗಳು :-
* ವಾಟ್ಸಪ್ ಗ್ರೂಪ್ ಸೇರಲು – Click here
ಹೆಚ್ಚಿನ ಕೃಷಿ ಆಧಾರಿತ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ 🌱🙏🏻..