ನಮಸ್ಕಾರ ಪ್ರೀತಿಯ ರೈತ ಭಾಂಧವರೇ, ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ತರುತ್ತಿದೆ.

ನಿಮಗೆಲ್ಲ ಗೊತ್ತಿರುವ ಹಾಗೆ ನೀರು ಒಂದು ಅತ್ಯಮೂಲ್ಯವಾದ ವಸ್ತು. ಈ ನೀರಿಗೆ ತನ್ನದೇ ಆದಂತಹ ಒಂದು ಬೆಲೆ ಇದೆ. ಕೃಷಿಯಲ್ಲಿ ಅಥವಾ ಸಾಗುವಳಿ ಮಾಡಲು ನೀರಿನ ಮುಖ್ಯ ಪಾತ್ರವಾದೆ. ಹೀಗಾಗಿ ನಾವು ನೀರನ್ನು ಪೋಲು ಮಾಡದೆ ಹಾಗೆ ಮತ್ತು ನೀರನ್ನು ಉಳಿಸುವುದಕ್ಕೋಸ್ಕರ ಹಾಗೂ ನೀರಿನ ಸಂರಕ್ಷಣೆ ಮಾಡುವುದಕ್ಕೆ ನೀರಾವರಿಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ.,

ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶವು ಕೃಷಿಯಿಂದ ಉದ್ಯಮದ ಕಡೆಗೆ ಸಾಗುತ್ತಿದ್ದರು ಸಹ ಭಾರತದಲ್ಲಿ ಕೃಷಿಯ ಮಹತ್ವವನ್ನು ಕಡೆಗಣಿಸುವಂತಿಲ್ಲ.

ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು, ಸರ್ಕಾರ ಜಾರಿತರುವ ಇಂತಹ ಯೋಜನೆಗಳ ಲಾಭವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿಯನ್ನು ಕಾಣಬೇಕು. 

ಕೃಷಿಯಲ್ಲಿ ನೀರನ್ನು ಹಾಳುಮಾಡದಂತೆ ಉಪಯುಕ್ತವಾಗಿ ಬಳಸಲು ಅನೇಕ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದೇವೆ. ಇದರಲ್ಲಿ ಮುಖ್ಯವಾದ ಪದ್ಧತಿಗಳು ಎಂದರೆ ಸೂಕ್ಷ್ಮ ನೀರಾವರಿ. ಈ ಸೂಕ್ಷ್ಮ ನೀರಾವರಿ ಪದ್ಧತಿಯಲ್ಲಿ ಎರಡು ವಿಧಗಳು ಬರುತ್ತವೆ. ಅವುಗಳು ಯಾವುದೆಂದರೆ,

•ಹನಿ ನೀರಾವರಿ
• ತುಂತುರು ನೀರಾವರಿ

ಹಾಗೆಯೇ ರೈತರು ಬೇರೆ ಬೇರೆ ಯೋಜನೆಗಳ ಮೂಲಕ ಅಥವಾ ತಂತ್ರಜ್ಞಾನಗಳ ಮೂಲಕ ನೀರನ್ನು ಉಪಯೋಗ ಮಾಡುವುದಕ್ಕೆ ಪ್ರಯತ್ನವನ್ನು ಮಾಡಬೇಕಾಗಿದೆ.

ಅದಕ್ಕಾಗಿ ರೈತರಿಗೆ ಅನೇಕ ಸಲಕರಣೆಗಳ ಅವಶ್ಯಕತೆ ಬೀಳುತ್ತದೆ ಮತ್ತು ಅನೇಕ ಉಪಕರಣಗಳು ಬೇಕಾಗುತ್ತದೆ.


ಇದಕ್ಕಾಗಿ ಕೇಂದ್ರ ಸರ್ಕಾರವು ರೈತರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಹಾಗೂ ರೈತರ ಆರ್ಥಿಕ ಪರಿಸ್ಥಿತಿಯನ್ನು ಕಾಪಾಡಲು ಅಂತಹ ಉಪಕರಣ ಮತ್ತು ಸಲಕರಣೆಗಳಿಗೆ ಸಹಾಯಧನವನ್ನು ನೀಡುತ್ತಿದೆ.

ಕೇಂದ್ರ ಸರ್ಕಾರವು ಎಪ್ರಿಲ್ 2021 ರಿಂದ ಅನ್ವಯವಾಗುವಂತೆ PMKSY ಯೋಜನೆಯ ಅಡಿಯಲ್ಲಿ ಹನಿ ನೀರಾವರಿಗೆ ಮತ್ತು ತುಂತುರು ನೀರಾವರಿಗೆ ಬೇಕಾಗುವ ಅನೇಕ ಉಪಕರಣಗಳ ಮತ್ತು ಸಲಕರಣೆಗಳ ಖರೀದಿಗಾಗಿ ಬೇಕಾಗುವ ಹಣಕ್ಕೆ ಸಹಾಯಧನವನ್ನು ನೀಡುತ್ತಿದೆ. ರೈತರು ಈ ಸಹಾಯಧನವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ.


ಈ ಯೋಜನೆಯಡಿಯಲ್ಲಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮದ ಅನುಷ್ಠಾನ ಮಾರ್ಗಸೂಚಿಗಳ ಅನ್ವಯ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಅವರವರ ಪಾಲಿನ ಮತ್ತು ಒಟ್ಟು ಶೇಕಡವಾರು ಸಹಾಯಧನದ ಪಾಲಿನ ವಿವರಗಳು ಈ ಕೆಳಗಿನಂತಿವೆ.


ಸಾಮಾನ್ಯವಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ತುಂತುರು(ಸ್ಪ್ರಿಂಕ್ಲರ) ನೀರಾವರಿಗೆ ಮತ್ತು ಹನಿ ನೀರಾವರಿಗೆ ಸಹಾಯಧನವನ್ನು ನೀಡುತ್ತದೆ. ನಾವು ಈಗ ಈ ಯೋಜನೆಯ ಅಡಿಯಲ್ಲಿ ಸಿಗುವ ಸಹಾಯಧನಗಳ ಬಗ್ಗೆ ತಿಳಿದುಕೊಳ್ಳೋಣ.

ತುಂತುರು(ಸ್ಪ್ರಿಂಕ್ಲರ) ನೀರಾವರಿ ಘಟಕದ ಸ್ಥಾಪನೆ ಮಾಡಲು ಸಿಗುವ ಸಹಾಯಧನ:

ಇದರಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ (ಅಂದರೆ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು) ಸಿಗುವ ಸಹಾಯಧನದ ಮೊತ್ತವು ಈ ಕೆಳಗಿನಂತಿದೆ.

•ಸಹಾಯಧನದಲ್ಲಿ
ಕೇಂದ್ರದ ಪಾಲು ಶೇಕಡಾ 33ರಷ್ಟು ಆಗಿರುತ್ತದೆ.

ಮತ್ತು ರಾಜ್ಯದ ಪಾಲು ಶೇಕಡಾ 57ರಷ್ಟು ಇರುತ್ತದೆ.

ಒಟ್ಟಾರೆಯಾಗಿ ರಾಜ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಸಾಮಾನ್ಯವಾಗಿ ಶೇಕಡಾ 90ರಷ್ಟು ಸಹಾಯಧನ ಸಿಗುತ್ತದೆ.

ಉಳಿದ ಇನ್ನಿತರ ರೈತರಿಗೆ ಅಂದರೆ ಸಣ್ಣ ಮತ್ತು ಅತಿ ಸಣ್ಣ(5 ಎಕರೆಗಿಂತ ಕಡಿಮೆ ಜಮೀನನ್ನು ಹೊಂದಿರುವ ರೈತರು) ರೈತರನ್ನು ಬಿಟ್ಟು ಉಳಿದ ರೈತರಿಗೆ ಸಿಗುವ ಸಹಾಯಧನಗಳ ಮೊತ್ತವು ಈ ಕೆಳಗಿನಂತಿವೆ.

ಈ ಯೋಜನೆಯಲ್ಲಿ ಕೇಂದ್ರದ ಪಾಲು ಶೇಕಡಾ 27ರಷ್ಟು ಇರುತ್ತದೆ ಮತ್ತು

ರಾಜ್ಯ ಸರ್ಕಾರದ ಪಾಲು ಶೇಕಡಾ 63ರಷ್ಟು ಇರುತ್ತದೆ.

ಒಟ್ಟಾರೆಯಾಗಿ ರಾಜ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಸಾಮಾನ್ಯವಾಗಿ 90ರಷ್ಟು ಸಹಾಯಧನ ಸಿಗುತ್ತದೆ.

ಹನಿ ನೀರಾವರಿ ಘಟಕದ ಸ್ಥಾಪನೆ ಮಾಡಲು ಸಿಗುವ ಸಹಾಯಧನ:

ಹನಿ ನೀರಾವರಿ ಘಟಕದ ಸ್ಥಾಪನೆ
ಮಾಡಲು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅಂದರೆ(ಐದು ಎಕರೆ ಒಳಗೆ ಜಮೀನು ಹೊಂದಿರುವ ರೈತರು) ಅವರಿಗೆ ಯೋಜನೆಯಲ್ಲಿ ಸಿಗುವ ಸಹಾಯಧನಗಳು ಈ ಕೆಳಗಿನಂತಿವೆ.

ಈ ಯೋಜನೆಯಲ್ಲಿ ಕೇಂದ್ರದ ಪಾಲು ಶೇಕಡಾ 33ರಷ್ಟು ಇರುತ್ತದೆ.

ಹಾಗೆಯೇ ರಾಜ್ಯ ಸರ್ಕಾರದ ಪಾಲು ಶೇಕಡ 57ರಷ್ಟು ಇರುತ್ತದೆ.
ಒಟ್ಟಾರೆಯಾಗಿ ರಾಜ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಸಾಮಾನ್ಯವಾಗಿ ಶೇಕಡಾ 90ರಷ್ಟು ಸಹಾಯಧನ ಸಿಗುತ್ತದೆ.

ಈ ಸೂಕ್ಷ್ಮ ನೀರಾವರಿ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರಿಗೂ ಸಹ ಸಹಾಯಧನಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.

ಈ ಸೂಕ್ಷ್ಮ ನೀರಾವರಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ನೀರಾವರಿ ಯೋಜನೆಯ ಅಡಿಯಲ್ಲಿ ಸಿಗುವ ಸಹಾಯಧನದ ಮತ್ತು ಈ ಕೆಳಗಿನಂತಿದೆ.

ಈ ನೀರಾವರಿ ಯೋಜನೆಯಲ್ಲಿ,
ಕೇಂದ್ರದ ಪಾಲು ಶೇಕಡಾ 27ರಷ್ಟು ಇರುತ್ತದೆ.
ಹಾಗೂ ರಾಜ್ಯ ಸರ್ಕಾರದ ಪಾಲು ಶೇಕಡಾ 63ರಷ್ಟು ಇರುತ್ತದೆ.
ಒಟ್ಟಾರೆಯಾಗಿ ರಾಜ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಸಾಮಾನ್ಯವಾಗಿ ಶೇಕಡಾ 90ರಷ್ಟು ಸಹಾಯಧನ ಸಿಗುತ್ತದೆ.

ಹಾಗೆಯೇ ಉಳಿದ ಇನ್ನಿತರೇ ಸಾಮಾನ್ಯ ವರ್ಗದ ರೈತರಿಗೆ ಈ ಯೋಜನೆಯಲ್ಲಿ ಸಿಗುವ ಸಹಾಯಧನದ ಮೊತ್ತವು ಈ ಕೆಳಗಿನಂತೆ ಇರುತ್ತದೆ.

ಇದರಲ್ಲಿ ಕೇಂದ್ರದ ಪಾಲು ಶೇಕಡಾ 27ರಷ್ಟು ಹೊಂದಿದೆ.
ಹಾಗೆಯೇ ಈ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲು ಶೇಕಡಾ 18ರಷ್ಟು ಇರುತ್ತದೆ.

ಒಟ್ಟಾರೆಯಾಗಿ ರಾಜ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಸಾಮಾನ್ಯವಾಗಿ ಶೇಕಡಾ 45ರಷ್ಟು ಸಹಾಯಧನ ಸಿಗುತ್ತದೆ.

ಒಟ್ಟಿನಲ್ಲಿ ಗರಿಷ್ಠ ಶೇಕಡಾ 90ರಷ್ಟು ಹಾಗೂ ಕನಿಷ್ಠ ಶೇಕಡಾ 45ರಷ್ಟು ಹಣವನ್ನು ಸಹಾಯಧನವಾಗಿ ನೀಡಲಾಗುತ್ತದೆ.

ಈಗ ನಾವು ಈ ಸೂಕ್ಷ್ಮ ನೀರಾವರಿ ಯೋಜನೆಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ:

#ಸೂಕ್ಷ್ಮ ನೀರಾವರಿ ಯೋಜನೆಯಲ್ಲಿ ಹನಿ ನೀರಾವರಿ ಮತ್ತು ತುಂತುರು(ಸ್ಪ್ರಿಂಕ್ಲರ) ನೀರಾವರಿ ಘಟಕವನ್ನು ಸ್ಥಾಪನೆ ಮಾಡಲು ಸಹಾಯಧನಕ್ಕಾಗಿ ಅರ್ಜಿ ಹಾಕಲು ಒಮ್ಮೆ ಮಾತ್ರ ಅವಕಾಶವಿರುತ್ತದೆ. ಅಂದರೆ ಒಬ್ಬ ಅರ್ಜಿದಾರರು ಒಂದೇ ಸಲ ಮಾತ್ರ ಈ ಯೋಜನೆಯನ್ನು ಪಡೆದುಕೊಳ್ಳಬಹುದು.


#ರೈತರು ಈ ಯೋಜನೆಯನ್ನು ಪಡೆದುಕೊಳ್ಳಲು ನಿಮ್ಮ ಹತ್ತಿರವಿರುವ ತಾಲೂಕು ಅಥವಾ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರದಕ್ಕೆ ಭೇಟಿ ನೀಡಿ ಅಲ್ಲಿ ರೈತರು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

# ನಂತರ ಅಧಿಕಾರಿಗಳು ರೈತರು ಹಾಕಿದ ಅರ್ಜಿಯನ್ನು ಪರಿಶೀಲಿಸಿದ ನಂತರ ಅದನ್ನು ದೃಢೀಕರಿಸುತ್ತಾರೆ.

#ರೈತರು ಯಾವುದೇ ಹೊಸ ಹೊಸ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.


# ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಕರ್ನಾಟಕ ರಾಜ್ಯ ಸರ್ಕಾರದ FRUITS ವೆಬ್ ಸೈಟ್ನಲ್ಲಿ ಕಡ್ಡಾಯವಾಗಿ ತಮ್ಮ ನೋಂದಣಿಯನ್ನು ಮಾಡಬೇಕಾಗಿರುತ್ತದೆ.


#ರೈತರು ಈ ಯೋಜನೆಯ ಫಲನುಭವಿಯಾಗಲು ಆ ವೆಬ್ ಸೈಟ್ ನಲ್ಲಿ ನೋಂದಣಿಯನ್ನು ಮಾಡಿಸಿಕೊಂಡು ಅದರ FRUITS. I. D. ನಂಬರನ್ನು ಪಡೆಯಬೇಕಾಗಿರುತ್ತದೆ.


#ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲಿನ ಅನುದಾನವನ್ನು ನಿಗದಿಪಡಿಸಿರುವ ಯೋಜನೆಯ ಮಾರ್ಗಸೂಚಿ ಅನ್ವಯ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ ಎಲ್ಲಾ ವರ್ಗದ ರೈತರಿಗೆ ಸಹಾಯಧನವನ್ನು ನೀಡಲಾಗುವುದು.


#ಪ್ರತಿ ರೈತರಿಗೆ ಅಂದರೆ ಪ್ರತಿಯೊಬ್ಬ ರೈತನಿಗೂ ಸಹ 5 ಹೆಕ್ಟರ್ ಪ್ರದೇಶದವರೆಗೆ ಸಹಾಯಧನ ನೀಡಬಹುದು. ಮೊದಲ ಎರಡು ಹೆಕ್ಟರ್ ಪ್ರದೇಶದವರೆಗೆ ಶೇಕಡ 45ರಿಂದ ಶೇಕಡ 90ರಷ್ಟು ಸಹಾಯಧನವನ್ನು ಮೇಲೆ ತಿಳಿಸಿದಂತೆ ನೀಡಲಾಗುವುದು.


#ರೈತರು 2 ಹೆಕ್ಟರ್ ಗಿಂತ ಹೆಚ್ಚಿನ ಭೂಮಿಯನ್ನು ಹೊಂದಿದ್ದರೆ ಅಂತಹ ರೈತರಿಗೆ 5 ಹೆಕ್ಟರ್ ಪ್ರದೇಶದವರೆಗೂ ನಿಗದಿಪಡಿಸಿದಂತೆ ಶೇಕಡಾ 45ರಷ್ಟು ಸಹಾಯಧನವನ್ನು ನೀಡಬಹುದಾಗಿದೆ.


#ಸರ್ಕಾರದಿಂದ ಅನುಮೋದನೆಗೊಂಡಿರುವ ಸಂಸ್ಥೆಗಳಿಂದ ಪಡೆದಂತಹ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಘಟಕಗಳು ಮಾತ್ರ ಸಹಾಯಧನ ಪಡೆಯಲು ಅರ್ಹರಾಗಿರುತ್ತವೆ. ಅಂದರೆ ಸರ್ಕಾರ ಅನುಮೋದಿಸಲಾಗದ ಸಂಸ್ಥೆಗಳಿಂದ ನೀವು ನೀರಾವರಿ ಮತ್ತು ತುಂತುರು ನೀರಾವರಿ ಘಟಕಗಳನ್ನು ಪಡೆದುಕೊಂಡರೆ ಅವುಗಳಿಗೆ ಯಾವುದೇ ರೀತಿಯ ಸಹಾಯಧನವನ್ನು ನೀಡಲು ಬರುವುದಿಲ್ಲ.
ತಯಾರಿಕಾ ಸಂಸ್ಥೆಗಳು ಮುಗಿದಿರುವುದರಿಂದ ಸದರಿ ಘಟಕಗಳಿಗೆ ನೀಡಬೇಕಾಗಿರುವ ಸಹಾಯಧನದ ವಿವರಗಳನ್ನು ಮುಂದಿನ ದಿನದಲ್ಲಿ ತಿಳಿಸಲಾಗುವುದು.


#ನೀರಿನ ಮೂಲವನ್ನು ಹೊಂದಿರುವ ರೈತರು ಮಾತ್ರ ಈ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಘಟಕಗ ಸ್ಥಾಪನೆಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ನೀರಿನ ಮೂಲವನ್ನು ಹೊಂದಿರದ ರೈತರು ಅಂದರೆ ಬೋರೆವೆಲ್, ಬಾವಿ ಹಾಗೂ ಇನ್ನಿತರ ಯಾವುದೇ ನೀರಿನ ಮುಲಗಳನ್ನು ಹೊಂದಿರದ ರೈತರು ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬರುವುದಿಲ್ಲ.


#ನೀವು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಮತ್ತು ನೀವು ಸಲ್ಲಿಸಿದ ದಾಖಲಾತಿಗಳನ್ನು ಪರಿಶೀಲಿಸಿ, ನೀರಾವರಿ ಘಟಕಗಳನ್ನು ಹನಿ ನೀರಾವರಿ ಮತ್ತು ತುಂತುರು ನೀರಾವರಿ ಘಟಕಗಳು ಎಂದು ಪ್ರತ್ಯೇಕ ಮಾಡಲಾಗುತ್ತದೆ.

ರೈತರು ಮುಖ್ಯ ಕೃಷಿ ಚಟುವಟಿಕೆಗಳ ಜೊತೆಗೆ ಕೃಷಿಯೇತರ ಚಟುವಟಿಕೆಗಳಿಗೆ ಆಸಕ್ತಿ ತೋರಿಸಿ, ವರ್ಷವಿಡೀ ಆದಾಯ ಪಡೆಯಬಹುದು. ಹಾಗೂ ರೈತರು ಸ್ವಯಂ ಪ್ರೇರಿತವಾಗಿ ಕೃಷಿಯಲ್ಲಿ ತೊಡಗಿರುವ ಹಾಗೂ ಸ್ವಂತ ಉದ್ಯೋಗ ಅವಕಾಶ ಮಾಡಿ ಕೊಟ್ಟಂತಾಗುತ್ತದೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ರೈತರಿಗೆ ಹೊರೆಯನ್ನುಂಟು ಮಾಡದಂತೆ, ಅವರ ಆರ್ಥಿಕ ಸ್ಥಿತಿಯನ್ನು ಕಾಪಾಡಲು, ಇಂತಹ ಅನೇಕ ಸಹಾಯಧನಗಳನ್ನು ನೀಡುತ್ತಿದೆ. ರೈತರು ಇಂತಹ ಯೋಜನೆಗಳ ಉಪಯೋವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕೆಂದು ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ.

ರೈತರು ಮುಖ್ಯ ಕೃಷಿ ಚಟುವಟಿಕೆಗಳ ಜೊತೆಗೆ ಕೃಷಿಯೇತರ ಚಟುವಟಿಕೆಗಳಿಗೆ ಆಸಕ್ತಿ ತೋರಿಸಿ, ವರ್ಷವಿಡೀ ಆದಾಯ ಪಡೆಯಬಹುದು. ಹಾಗೂ ರೈತರು ಸ್ವಯಂ ಪ್ರೇರಿತವಾಗಿ ಕೃಷಿಯಲ್ಲಿ ತೊಡಗಿರುವ ಹಾಗೂ ಸ್ವಂತ ಉದ್ಯೋಗ ಅವಕಾಶ ಮಾಡಿ ಕೊಟ್ಟಂತಾಗುತ್ತದೆ.

ಈ ಯೋಜನೆ ಬಗ್ಗೆ ತಿಳಿಯಬೇಕೆಂದರೆ ಈ ಲಿಂಕ್ ಅನ್ನು ಒತ್ತಿ – https://pmksy.gov.in/


ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲಿಂಕನ್ನು ಒತ್ತಿರಿ….👇👇

https://youtu.be/KKS82gMP2_A

ರೈತರು ಮುಖ್ಯ ಕೃಷಿ ಚಟುವಟಿಕೆಗಳ ಜೊತೆಗೆ ಕೃಷಿಯೇತರ ಚಟುವಟಿಕೆಗಳಿಗೆ ಆಸಕ್ತಿ ತೋರಿಸಿ, ವರ್ಷವಿಡೀ ಆದಾಯ ಪಡೆಯಬಹುದು. ಹಾಗೂ ರೈತರು ಸ್ವಯಂ ಪ್ರೇರಿತವಾಗಿ ಕೃಷಿಯಲ್ಲಿ ತೊಡಗಿರುವ ಹಾಗೂ ಸ್ವಂತ ಉದ್ಯೋಗ ಅವಕಾಶ ಮಾಡಿ ಕೊಟ್ಟಂತಾಗುತ್ತದೆ.

ಹಾಗೂ ಸುಸ್ಥಿರ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ, ರೈತರು ಅಭಿವೃದ್ಧಿಯಲ್ಲಿ ಸಾಗಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಕಾರ್ಯಗಳನ್ನು ಸರ್ಕಾರ ಮಾಡುತ್ತಿದೆ.

ಇದರ ಸದುಪಯೋಗ ಪಡಿಸಿಕೊಂಡು ರೈತರು ಅಭಿವೃದ್ಧಿ ಹೊಂದಬೇಕು ಎನ್ನುವ ದೃಷ್ಟಿಯಿಂದ ಸರ್ಕಾರವು ಮಹತ್ವದ ಕಾರ್ಯ ಮಾಡುತ್ತಿದೆ. ಹಾಗೂ ರೈತರು ಸ್ವಾವಲಂಬಿ ಜೀವನ ನಡೆಸಲು ಇದು ಪ್ರಮುಖ ಪಾತ್ರ ವಹಿಸುತ್ತದೆ.

ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶವು ಕೃಷಿಯಿಂದ ಉದ್ಯಮದ ಕಡೆಗೆ ಸಾಗುತ್ತಿದ್ದರು ಸಹ ಭಾರತದಲ್ಲಿ ಕೃಷಿಯ ಮಹತ್ವವನ್ನು ಕಡೆಗಣಿಸುವಂತಿಲ್ಲ.

ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು, ಸರ್ಕಾರ ಜಾರಿತರುವ ಇಂತಹ ಯೋಜನೆಗಳ ಲಾಭವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿಯನ್ನು ಕಾಣಬೇಕು.

ರೈತರು ಮುಖ್ಯ ಕೃಷಿ ಚಟುವಟಿಕೆಗಳ ಜೊತೆಗೆ ಕೃಷಿಯೇತರ ಚಟುವಟಿಕೆಗಳಿಗೆ ಆಸಕ್ತಿ ತೋರಿಸಿ, ವರ್ಷವಿಡೀ ಆದಾಯ ಪಡೆಯಬಹುದು. ಹಾಗೂ ರೈತರು ಸ್ವಯಂ ಪ್ರೇರಿತವಾಗಿ ಕೃಷಿಯಲ್ಲಿ ತೊಡಗಿರುವ ಹಾಗೂ ಸ್ವಂತ ಉದ್ಯೋಗ ಅವಕಾಶ ಮಾಡಿ ಕೊಟ್ಟಂತಾಗುತ್ತದೆ. 

ಇನ್ನು ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ🌱🌿
ವೆಬ್ಸೈಟ್ನ ಸಂಪರ್ಕದಲ್ಲಿ ಇರಿ

Leave a Reply

Your email address will not be published. Required fields are marked *